Sunday, 1 December 2019
ಹಾಣಾದಿ ಕುರಿತು ಸಂದೀಪ್ ಈಶಾನ್ಯ ಅವರ ಅಭಿಪ್ರಾಯ
ಹಾಣಾದಿ ಕುರಿತು ರಾಜೇಶ್ ಶಿಂಧೆಯವರ ವಿಮರ್ಶೆ ಲೇಖನ
Saturday, 25 August 2018
ಪಿ.ಕೆ ನವಲಗುಂದರವರ ಕವನ
ತಾತ್ಕಾಲಿಕ ಪ್ರೇಯಸಿ
ಹೈಸ್ಕೂಲ್ ಡೇ ನಿಂದ ಕಾಲೇಜಿಗೆ ಶಿಪ್ಟಾದ
ಕಲರ್ ಪುಲ್ ಡ್ರೆಸ್ಗಳೊಂದಿಗೆ
ಕನಸುಗಳನ್ನು ಮಾರಲಾಗುತ್ತದೆ ?
ಕೂದಲು ತೊಯ್ದು ತೊಟ್ಟಿಕ್ಕುವ ಇಬ್ಬನಿ
ವರ್ಣಿಸುವ ಬಿ ಎ ಕಾಲೇಜಿನ ಲೆಕ್ಚರರ್ನ
ಪಾಠ ,
ಪಾರ್ಕಿನಲ್ಲಿನ ಚುಕ್ಕಿ ಉಸಿರು,
ಸೀಗರೇಟ್ ಅಡ್ಡಾಗಳಲ್ಲಿ "ಆಪರೇಷನ್ ಲವ್"
ಹಾಗೂ ಕ್ರಾಂತಿ ಮಾತಗಳು
ಮಣ್ಣು ತೊಟ್ಟಿಲಲ್ಲಿ ಮಲಗಿದ್ದ ಮಗುವಿಗೆ
ಮೊಬೈಲ್ ಹಿಡಿದು ರೊಮ್ಯಾಂಟಿಕ್ ಕಾವ್ಯ
ಒತ್ತಿ ಒತ್ತಿ ಹೇಳುವಾಗ ಕಂದನ ಕೈಕಾಲು
ಬಡೆದಾಡುತ್ತವೆ
ಬೈಪಾಸ್ ರಸ್ತೆಯ ತಿರುವಿನ ಪಾನೀಪುರಿ
ಅಂಗಡಿ ಮೋಟ ಹುಡಗ ಇತ್ತೀಚೆಗಷ್ಟೆ
ಸುಮ್ಮನೆ ನಗುತ್ತಿದ್ದ
ಆ ಹುಡುಗಿ ತಾತ್ಕಾಲಿಕ ನಗು ಕಾರಣ !
ಹಸಿದ ಹೊಟ್ಟಿ ತಣ್ಣಗಾಗಿರಬಹದು !
ಮಧ್ಯರಾತ್ರಿ ಬೆಣಚು ಕಲ್ಲುಗಳ ಮೇಲೆ
ಹೆಸರು ಕೆತ್ತುವ ಖಯಾಲಿ
"ಹೇ" ಯಾರದು ಈ ರಾತ್ರಿ
ಹಳದಿ ಕಾಯಿಲೆ ಹೂವಿನ ಶವಕ್ಕೆ
ಅತ್ತರ ಸಿಂಪರಿಸುವವರು
ಸ್ಮಶಾನದ ನಟ್ಟನಡುವಿನ
ಅಸ್ತಿತ್ವದ ಗೈರಾಗಬಹದು
ಕಂಬನಿ ತುಟಿಗಳ ಮಧ್ಯ ನಡಗುವ ರಾತ್ರಿಗಳ
ನೀರವತೆ "ಛೇ" ಈ ಒಣ ಹವೆಯಲ್ಲಿ
ತಾತ್ಕಾಲಿಕ ಪ್ರೇಯಸಿ ನೆನಪು
ಒಂದೇ ನೋಟ್ ಬುಕ್ನ್ ಎರಡು ಕಥೆ
ಬೆರಳ ತುದಿ ಚಿತ್ರಿಸುವ ಹಳೆ ಹಾರ್ಟ್ ಸಿಂಬಾಲ್
ಅತ್ತು ಬೆತ್ತಲಾಗುವ ಎಷ್ಟೋ ಲಾಸ್ಟ್ ಬೆಂಚ್
ಲವ್ ಸ್ಟೋರಿಗಳು ಕೊನೆಗೊಮ್ಮೆ
"ಪ್ರೀತಿ ಬಾರ್"ನ್ ತಳ ತುಂಬಿಕೊಳುತ್ತವೆ
#ಪಿ ಕೆ...?
Wednesday, 15 August 2018
ತಾತ್ಕಾಲಿಕ ಪ್ರೇಯಸಿ -2( ರಮ್ಯ ಕಡೂರು/ ಸಾವನ್ ಪದ್ಯಗಳು)
ತಾತ್ಕಾಲಿಕ ಪ್ರೀಯಕರ
ನಡುರಾತ್ರಿಯ ಚಂದಿರನ
ಬೆಳಕಲಿ ಹೆಣೆದ ಕಲ್ಪಿತ
ನೆರಳಲ್ಲಿ ಆಲೋಚಿಸುತ್ತೇನೆ ಆಳದ ಏಕಾಂತದಲ್ಲಿ ನಮ್ಮಿಬ್ಬರ ಪ್ರತಿಬಿಂಬವೆಂದು
ಅದ್ಯಾವ ಪ್ರವಾಹ ನೀನು?
ಮನಕಲಕಿ ನಿಶಬ್ಧವಾಗಿ ಮರೆಯಾಗಿಬಿಟ್ಟೆ
ಇರುವುದಕ್ಕೆಲ್ಲಾ ಬೆನ್ನಿಕ್ಕಿ
ನಾಚಿ ತಿರುಗಬೇಡ ?
ಅಲ್ಲಾದರೂ ನಿನ್ನ ತಾತ್ಕಾಲಿಕ
ದರುಷನವಾಗಬಹುದು
ನನ್ನ ಅರೆನಗ್ನ ಬೆನ್ನಮೇಲೆ ಕವಿತೆ ಬರೆಯುವ
ನಿನ್ನ ಬಯಕೆ
ಎತ್ತ ಹೊರಟು ಹೋಯಿತು ಇನಿಯ?
ಇಗೋ ಇಲ್ಲಿದೆ ಆ ಪ್ರಶಾಂತತೆ
ಬಂದುಬಿಡು ಮರುಮಾತಾಡದೆ !
ವಿನಾಕಾರಣ ಜೀವ ಹಸಿಯುತದೆ, ಬಳಲುತದೆ
ಕ್ಕೊಕ್ಕಿನ ಕಡಲ ಹಕ್ಕಿಯೊಂದಕ್ಕೆ ಸಿಲುಕಿದ ಮೀನಿನಂತೆ ಸುಮ್ಮನೆ ಈ ರಾತ್ರಿ ಹಿಂಬಾಲಿಸಿ ಬಿಡು ಎಲ್ಲಾ ರಿಯಾಯಿತಿಯು ನಿನ್ನದೆ !
ನೀನು ಈ ದೇಹದ ಚೇತನವಲ್ಲ
ಇಗಿಗ ತಾತ್ಕಾಲಿಕ ಪ್ರೀಯತಮನಷ್ಟೆ !
ಸಂದೇಶಗಳೆಲ್ಲ ಕುರುಹುಗಳಾಗಿವೆ ತಾತ್ಕಾಲಿಕ ಪ್ರೀತಿಗೆ ಆದರೂ ಸದಾ ನನ್ನೆದೆಯಲಿ
ಹೂ ನೀನು
ಬಾಡುವುದಿಲ್ಲ ಮತ್ತೆಂದಿಗೂ ಅರಳುವುದಿಲ್ಲ!
ಇದೊಂದು ಅನುಭಸುವಿಕೆಯಷ್ಟೇ
ಈ ಪದ್ಯದಂತೆ !
ರಮ್ಯ, ಕಡೂರು
2)
ತಾತ್ಕಾಲಿಕ ಪ್ರೇಯಸಿ
ನಿನ್ನ ಸ್ಪರ್ಶಿಸುವ ತವಕದಲಿ
ಬಿಸಿ ಏರಿಳಿತದ ಹೃದಯ
ಯಾವ ಸೂಚನೆಯು ಕೊಡದ ನಿನ್ನ
ಸ್ಪರ್ಷದಿ ಹಗುರಾಯಿತು !
ನನ್ನೀ ಬೇಸಿಗೆಯ ತುಟಿಗೆ
ನಿನ್ನ ಚಳಿಗಾಲದ ಚುಂಬನ
ಒಂದು ಬೆವರಾಯಿತು
ಇನ್ನೊಂದು ಕಣ್ಣೀರಾಯಿತು !
ಸೂರ್ಯ ದೇಹಕ್ಕೆ
ಚಂದಿರೆಯ ಗಾಳಿ ಸೋಕಿರಲು
ಸುರಿವ ನಕ್ಷತ್ರಗಳ ಮಳೆಗೆ
ಈ ಭೂಮಿಯೇ ಮಧುಮಂಚ !
ಅಮವಾಸೆಯ ನಡುರಾತ್ರಿ
ಬೆತ್ತಲಾದ ಕಿಡಿಗೇಡಿ ಮನಕ್ಕೆ
ನಿನ್ನುಸಿರ ಶಾಖ ತಾಕಿದಾಗ
ನಮ್ಮಿಬ್ಬರ ಮೊದಲ ರಾತ್ರಿಯು
ಸೋತು ಗೆದ್ದಿತು !
ಸಾವನ್, ಕಲಬುರಗಿ.
Tuesday, 14 August 2018
ತಾತ್ಕಾಲಿಕ ಪ್ರೇಯಸಿ/ ಪ್ರೀಯಕರ !
ತಾತ್ಕಾಲಿಕ ಪ್ರೀಯಕರ
ಶ್ರಾವಣದ ಕಡು ಪಾಪಿ ಮಳೆ
ವಿರಹ ಗೋಡೆಗೆ ಕಾಮನ ಬಾಣದ ಹೊಡೆತ
ತೀವ್ರ ಮೋಹದಲೆಗಳ ಸುನಾಮಿ ನಡಿಗೆ !
ಅವನೊಳಗೂ ಥಂಡಿ ಗಾಜಿಗೆ ಬಿಸಿ ತುಟಿಯ ಸ್ಪರ್ಶ !
ಅವನೋ ಗಂಧರ್ವ ಲೋಕದ ಮೋಡಿಗಾರ
ಘಳಿಗೆ ಸಿಕ್ಕು ಅಮಲೇರಿಸಿ ಮುದ್ದಿಸಿ ಮರೆಯಾಗುವ
ತಾತ್ಕಾಲಿಕ ಮಾಯಗಾರ
ಆಯಾಸಗೊಂಡ ಪ್ರಯಾಣದ ತುಂಬೆಲ್ಲಾ
ಕಾಡುವ ಕಚಗುಳಿ ಬೆರಳುಗಳ ಯಾನ !
ಅವನ ಪ್ರಣಯದ ಕಥೆಯನ್ನೇ ಪದೇ ಪದೇ ಓದಿಕೊಳ್ಳುವ ನಾನು ಇದೀಗ ಇನ್ನಷ್ಟು
ಅಸಹಾಯಕ ಹಿಂಸೆಗೆ ಬಲಿಯಾದ ಒಂಟಿ ಹಂಸ ಪ್ರೇಮಿ !
ಇಲ್ಲಿ ಗೋಡೆಗಳು ಮೈಬಿಸಿಗೆ ಗೋಣು ಬಗ್ಗಿಸಿವೆ !
ಎದುರಿಗೊಬ್ಬ ದುರುಗುಟ್ಟುವಾಗ
ಅವನಿರಬೇಕಿತ್ತು ಈ ಕ್ಷಣ !
ಛೇ ! ಮತ್ತೆ ದೀರ್ಘ ಉಸಿರು ಬಿಡುತ್ತಾ ಹೆಡ್
ಫೋನ್ಸ್ ಕಿವಿಗಿಟ್ಟರೆ "ಅಂಗ ಲಗಾ ದೇ ರೇ.." ರಿಂಗಣಿಸಿ ಮೈಯೆಲ್ಲಾ ಮತ್ತಷ್ಟು ಚಳಿಗೆ
ಬಿಸಿ ನಾಲಿಗೆಯ ಹಂಬಲ !
ಸಿಕ್ಕು ಬಿಡಲಿ ಅವನೊಮ್ಮೆ
ಒಂಟಿ ರಾತ್ರಿಗೆ ಜೊತೆಯಾಗಿ ತಣ್ಣನೆಯ ಬೆಳದಿಂಗಳಿರಲಿ
ಕೊಡು ಕೊಳ್ಳುವ ಕೆಂಡಗಳ ಲೆಕ್ಕವೊಂದು ತೀರಲಿ
ಇಂದಿಗೂ ಘಟಿಸದ ಹೆಣ್ತನವೊಂದು ಜರುಗಲಿ
ಮೊಗ್ಗೊಂದು ಹಾಗೆಯೇ ಸದ್ದಿಲ್ಲದೇ ಹೂವಾಗಲಿ...!
ಸ್ನೇಹಲತಾ.
ತಾತ್ಕಾಲಿಕ ಪ್ರೇಯಸಿ
ಕಾಫಿ ಕಪ್ಪಿನ ಕೊನೆಯ ಹನಿಯಲ್ಲು ಕೆನೆಗಟ್ಟಿದ ಕಡಲಿದ್ದಿದ್ದರೆ
ನಿನ್ನ ಫೋಟೋಗೊಂದು ಮುತ್ತಿಟ್ಟಿದ್ದಕ್ಕೆ ಮೊಡವೆಯೇ ಏಳುತ್ತಿರಲಿಲ್ಲ!
ಹತ್ತು ಸಲ ಲೈಕ್ ಒತ್ತಿದ್ದರು ನೆಟ್ಟಗಾಗದ ಸೊಟ್ಟ ಮುಖದ ಫೋಟೋ,
ಫೋನ್ ಸ್ಕ್ರೀನಿಗೆ ಸಿಗುವಷ್ಟು ಸುಲಭವಾಗಿ ತುಟಿಗೆ ಸಿಕ್ಕಿದ್ದರೆ, ಚಳಿಗಾಲದಲ್ಲೂ ಬೆವರುವ ಕೆಲಸ ಸಿಗುತ್ತಿತ್ತೇನೋ ?!
ಬೆರಳ ಸೋಕುವುದೂ ಕೂಡ ಬೆದೆಯಂತೆ ಕಾಡುವಾಗ,
ಆಷಾಢದ ಗಾಳಿಯ ಕೆನ್ನೆಗೂ ಒಂದೆರಡು ಲಿಪ್ಸ್ಟಿಕ್ ನ ಗುರುತು ಸಿಗಬೇಕಿತ್ತು!
ದೂರದಲ್ಲಿ ಬೀಸುವ ಚಂಡಮಾರುತಕ್ಕೆ ಮೈ ಮೇಲಿನ ಉಲ್ಲನಿನ ಸ್ವೆಟರ್ ಆಗಿರುವ ನೀನು
ತಾತ್ಕಾಲಿಕ ಶಾಖ ಹೆಚ್ಚಿಸುವ ಶಾಖೆ.
ಚಳಿಗಷ್ಟೇ ಬೆಚ್ಚಗೆ!
ನೀ ಹೊಸ ಜೀನ್ಸ್ ತೊಟ್ಟ ದಿನ
ನನ್ನ ಅಂಗಿಯ ಗುಂಡಿ ಕಿತ್ತು ಹೋದ ಹಾಗೆ ಕನಸು ಬೀಳುತ್ತದೆ!
ಏನು ಮಾಡಲಿ ತೊಟ್ಟಿಕ್ಕುವ ನಲ್ಲಿಗೆ ಮಾತಾಡುವ ನಾಲಿಗೆ ಇಲ್ಲ.
ಇರುಳೆಲ್ಲ ರಸಶಾಸ್ತ್ರ ಓದಿದರೂ ಸಹ, ನಿನ್ನೆದುರು ಸಿಕ್ಕಾಗ ಅನಕ್ಷರಸ್ತನಂತೆಯೇ ವರ್ತಿಸುವೆ, ನಿನಗೆ ಗೊತ್ತಾಗುವ ಹಾಗೆ!
ನಿರಪರಾಧಿ ನೀಲಿ ತಾರೆಯಾಗಿರುವ ನನ್ನ ಯೌವ್ವನಕ್ಕೆ ,
ಬಟ್ಟೆ ತೊಟ್ಟವರ ಬೆನ್ನಳತೆ ತಿಳಿಯದು!
ನಿನ್ನ ಕಿರು ಬೆರಳನೂ ತಾಕದ ಕಣ್ಣೊಳಗಿನ ಕೈಯಲಿ ಯಾವ ಮೈಥುನದ ಗುರುತೂ ಇಲ್ಲ!
ಮಳೆಗಾಲಕೆ ಮೈಯೊಡ್ಡಿದ ಕೊಡೆಯಂತ್ತಿರುವ ನಿನಗೂ ತೊಟ್ಟಿಕ್ಕುವ ತವಕ ಇರಬಹುದೇನೋ?
# ಕವಿಚಂದ್ರ
Thursday, 17 May 2018
ಕಾವ್ಯಮನೆ ನಿರ್ದೇಶಕ ಚಾಂದರವರ ಪದ್ಯ..
ಮೋರಿ ಅಲೆ
ದನದ ಉಚ್ಚೆಯಲಿ ದಾರಿ ಮಾಡಿ,
ಕೆಚ್ಚಲಲಿ ಕಿರೀಟ ತೊಟ್ಟು,
ಬಾಯಿಯಲ್ಲ ಬಚ್ಚಲು ಮಾಡಿ
ಬಾಯ್ಬಡುಕೊಂಡು ಬಂತು ನೋಡಿ
ಚರಕ ಹಿಡ್ದನ್ ನರಕ ತೋರ್ಸಿ,
ಹೊಲ್ಸು ಬಾಯಲ್ ರಾಮನ್ ಕರ್ಸಿ
ಗೋಡ್ಸೆಗೆಲ್ಲ ಗುಡಿಯ ಕಟ್ಟಿ
ಕಂಡವರಿಗೆಲ್ಲ ಗೋರಿ ಕಟ್ಟ್ಸಿ
ಹೆಜ್ಜೆ ಇಟ್ಟಲೆಲ್ಲಾ ರಕ್ತದ ದಾರಿ
ನಮ್ಮೂರಿಗೂ ಬಂತೂ ನೋಡ್ರೋ ಮೋರಿ!
ಗೋಧ್ರಾ ಗಿದ್ರಾ ಮರತೇ ಇಲ್ಲ
ಸುಟ್ಕೊಂಡವರು ಬದ್ಕೇ ಇಲ್ಲ
ಆದ್ರೂ ಇವನೇ ರಾಜ ಅಂತೆ
ಕುರುಡರ್ ಊರಾಗ್ ಒಂದೇ ಲಾಟಿ ಅಂತೆ
ಖಾಕಿ ಚಡ್ಡಿ ಹುಡ್ಗ ಇವನು, ಹೆಡ್ರೂ ಇದ್ರೂ ಬ್ರಹ್ಮಚಾರಿ!
ಮೊನ್ನೆ ಗಾಂಧಿ ಕಣ್ಣು ಕಿತ್ತಿ ಸ್ವಚ್ಚ ಭಾರತ್ ಮಾಡದವನಂತೆ!
ಅನ್ನಗಿನ್ನ ತಿನ್ನಕ್ಕಿಲ್ಲ ಅಣಬೆ ಅಂದೆ ಪ್ರಾಣ ಅಂತೆ!
ದನದ ಬಾಡು ಮುಟ್ಟೆ ಇಲ್ಲ ಕೊಟ್ಟರೇ ಬ್ಯಾಡ ಅನ್ನಲ್ಲವಂತೆ !
ದೇಶ ಆಳಾಕೆ ಬಂದ್ವನಂತೆ ವಿಶ್ವಗುರು ಆಗೌನಂಥೆ!
ಹೆಂಡ್ರು ಮಕ್ಳು ಇಲ್ದೇ ಇದ್ರೂ ಆಸ್ತಿಯಂತೂ ಭಾರಿಯಂತೆ!
ಬೇಂದ್ರೆ ಗಿಂದ್ರೆ ಅಂತನಂತೆ ಕವಿತೆಗಿವಿಗೆ ಹಾಡ್ತಾನಂತೆ
ಬಾಯಿ ಬಿಟ್ರೇ ಬಚ್ಚಲ್ ವಾಸನೆ ಡೆಟಾಯಿಲ್ ಪೆನಾಯಿಲ್ ಕೊಡಬೇಕಂತೆ !
ಭಾರತದಾಗೆ ಇವನ್ ಭಕ್ತರೂ ಭಾರಿ ಆವರೇ,
ಎದೆಯ ಸೀಳಿ ಇವ್ನ್ ಫೋಟೋ ತೋರ್ಸಾರಂತೆ!
ರಾಮ ಬಿಟ್ರೇ ನೆಟ್ಸೂ ಇವನೇ,
ಸೀತೆಯಂತೂ ಲೆಕ್ಕಕ್ಕಿಲ್ಲ
ಕಲಿಯುಗ್ದ್ ಕಾಮಧೇನು ಲೋಕ ಉದ್ದಾರ ಮಾಡ್ತಾನಂತೆ !
ಜೈಲೂರಪ್ಪ ಇವನ ಭಕ್ತ , ಮನೆಲಿ ಇವನ್ದೇ ಫೋಟೋ ಅಂತೆ
ಅವನ ಅಂಗಾಲೂ ನೆಕ್ಕೋದರಲ್ಲಿ ನಾಯಿಗಿಂತ ಇವನೇ ಮೇಲಂತೆ !
ಈ ಮುದುಕನ ಬಾಯಲಿ ಹಲ್ಲೇ ಇಲ್ಲ ಆದ್ರೂ ರಾಜ್ಯ ಆಳ್ತಾನಂತೆ
103 ಕೆ ನಿಂತ್ತೆ ಬಿಟ್ಟಿದೆ, ಆದರೂ ಗದ್ದಿಗೆ ಅವನ್ದೇ ಅಂತೆ !
ಕಮಲ ಬಿಟ್ಟು ಹೋಗಿದ್ದನಂತೆ ಒಡೆದ ತೆಂಗಿನ ಕಾಯಿ ಆಗಿದ್ನಂತೆ!
ಜೈಲಿಗೂ ಇವನ್ಗೂ ಭಾರಿ ಸದರಾ
ಆಗಾಗಾ ಹೋಗಿ ಬಂದು ಮಾಡ್ತಾನಂತೆ !
ಆಣೆ ಇಡಾಕೆ ಎಲ್ರೂ ಸತ್ರೂ
ರೈತರ್ರೂ ಇನ್ನೂ ಬದ್ಕೇ ಐವರೇ
ಅವರ ಮೇಲೂ ಆಣೆ ಮಡಗಿ ಐತು, ಮೈತ್ರಿ ಗಿತ್ರಿ ಒಪ್ಪಕ್ಕಿಲ್ಲ
ತನ್ನೇ ಮಾರ್ಕೊಂಡವನಂತೆ ತಿರ್ಪೆವಾಲಾ!
ಗದ್ದಿಗೆಗೆ ಈಗ ನಾಯಿ ಬಂತು
ಊರು ಕೇರಿ ಎಲ್ಲ ದನದ ಉಚ್ಚೇ ವಾಸನೆ
ಅದೇ ಬಾಯಲಿ ಒದರತಾ ಐತೇ ಒಂದೇ ಸಮನೆ
ಭಾರತ ಮಾತಕೀ ಅಂತೆ ಜೈ ಭಾರತ ಮಾತಾಕೀ ಜೈ.........ಅಂತೆ
# ಕವಿಚಂದ್ರ
Saturday, 18 November 2017
ಸಾವು
ದ ಡೆತ್ ಆಫ್ ಇವಾನ್ ಇಲಿಚ್ (ಸಾವು) - ಲಿಯೋ ಟಾಲ್ ಸ್ಟಾಯ್.
ಅನು :- ಓ ಎಲ್ ನಾಗಭೂಷಣ ಸ್ವಾಮಿ.
ಈ ದೀರ್ಘ ಕಥೆಯ ಪ್ರತಿ ಪುಟದಲ್ಲಿಯು, ನಿಜವಾದ ಬದುಕೆಂದರೆ ಯಾವುದು ? ಅದು ಹೇಗೆ ? ಮನುಷ್ಯ ಬದುಕಿನ ಸತ್ಯಗಳನ್ನು ಒಪ್ಪಿಕೊಳ್ಳದೆ, ತನ್ನ ಅಭಿಪ್ರಾಯಗಳನ್ನು ಯಾಕೆ ಸಮರ್ಥಿಸಿಕೊಳ್ಳುತ್ತಲೆ ಸಾಗುತ್ತಾನೆ ? ಎನ್ನುವುದನ್ನು ಎದುರುಗೊಳ್ಳುತ್ತಲೆ ನಾವು ಅದನ್ನು ಕಂಡುಕೊಳ್ಳಲು ಯೋಚಿಸಬಹುದಾದ ದಾರಿಗಳಿವೆ. ಸಾವಿನ ತೀರಾ ಹತ್ತಿರವಿರುವ ರೋಗಸ್ಥ ಮನುಷ್ಯನೊಬ್ಬನ ನರಳುವಿಕೆಯ ಕಥೆ ಇದು. ಅವನು ನಾ ಸಮುದ್ರದಾಳದಲ್ಲಿಯಾಗಲಿ ಅಥವಾ ಭೂಮಿಯ ಗರ್ಭದಲ್ಲಾಗಲಿ ಇಷ್ಟು ಒಂಟಿತನ ಅನುಭವಿಸಲು ಸಾಧ್ಯವೆ ಇಲ್ಲ ಎನ್ನುತ್ತಾನೆ.
ಇವಾನ್ ಇಲಿಚ್ ಸಮಾಜದ ಕಣ್ಣಿಗೆ ಒಬ್ಬ ಪರಿಪೂರ್ಣ ಮನುಷ್ಯ. ಮನೆ, ಹೆಂಡತಿ, ಮಕ್ಕಳು, ಉದ್ಯೋಗ ಎಲ್ಲವೂ ಉಂಟು ಆದರೆ ಅವನ ಕ್ರಮಬದ್ಧವಾದ ಬದುಕು ಅವನಿಗೆ ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಉಲ್ಟಾ ಹೊಡೆಯುತ್ತದೆ. ಸಂಸಾರದ ಭಿನ್ನಾಭಿಪ್ರಾಯಗಳು, ಮಗಳ ಒಣ ತಿರುಗಾಟ , ಹೆಂಡತಿಯ ಯಾಂತ್ರಿಕತೆ ಇವೆಲ್ಲ ಅವನನ್ನು ಕೊನೆಗಳಿಗೆಯಲ್ಲಿ ಹೇಸಿಗೆ ತರಿಸುತ್ತವೆ.
"ಟಾಲಸ್ಟಾಯನ ಈ ಕಥೆ ಸಾವನ್ನು ಕುರಿತು ನಾನು ಓದಿರುವ ಗ್ರೇಟೆಸ್ಟ್ ಕಥೆ" ಎಂದು ಹೇಳುವ ಓ ಎಲ್ ಎನ್ ಅವರು ತುಂಬಾ ಅಚ್ಚುಕಟ್ಟಾದ ಅನುವಾದ ಮಾಡಿದ್ದಾರೆ. ಕಥೆಯ ಒಂದು ಗೆರೆಯು ಸರಿಯದಂತೆ.
ಕನ್ನಡದ ಸಾಹಿತ್ಯದಲ್ಲಿಯು ಸಾವಿನ ವಿಷಯ ವಸ್ತು ಇಟ್ಟುಕೊಂಡು ಹಲವು ಬರಹಗಳು ಬಂದಿವೆ. ಆದರೆ ನನ್ನ ಮಟ್ಟಿಗಂತೂ ಇಷ್ಟು ಅಚ್ಚುಕಟ್ಟಾಗಿರುವ ಕಥೆ ಇನ್ನೊಂದಿಲ್ಲ. ಇಲಿಚನಲ್ಲಿರುವ " ಸಾವು ಎಂಬ ಒಂದು ಪ್ರಜ್ಞೆಯಲ್ಲಿ " ಏನೆಲ್ಲಾ ಬಿಚ್ಚಿಕೊಳ್ಳುತ್ತ ಹೋಗುತ್ತಾನಲ್ಲ, ಅವನ ಬಾಲ್ಯ, ಬದುಕಿನ ಅತ್ಯುತ್ತಮ ಸಂಗತಿಗಳು ಇವೆಲ್ಲವನ್ನೂ ಉಸಿರಿನಂತೆ ಒಳಗೆಳೆದುಕೊಳ್ಳುತಿರುವಾಗ , ಅವನು ಬದುಕಬೇಕಾಗಿದ್ದು ಹೀಗಲ್ಲ ಎನಿಸುತ್ತಿರುತ್ತದೆ. ಆದರೆ ಬದಲಾವಣೆಗೆ ಹೊರಳಬೇಕಂದರು ಕಪ್ಪು ಚೀಲದಲ್ಲಿ ಬಂಧಿಯಾಗಿ ಬರೀ ಕೊರಳಿನಿಂದ ಮಾತಾಡುವ ಸ್ಥಿತಿಯಲ್ಲಿರುತ್ತಾನೆ.
ನನಗೆ ಪೀಟರನ ವರ್ತನೆ ತುಂಬಾ ಕಾಡಿತು. ಸಾಮಾನ್ಯವಾಗಿ ನಾವು ದೂರದವರ ಸಾವನ್ನು ಗಂಭೀರವಾಗಿ ಪರಿಗಣಿಸುವುದೆಯಿಲ್ಲ ಅದು ಪರಿಗಣಿಸಬೇಕೆ ? ಏನೋ ಗೊತ್ತಿಲ್ಲ ಅದೊಂದು ನಮ್ಮೊಳಗಿನ ವಿಷಯ. ಕುವೆಂಪು ಸಹ ಹೇಳುವುದು ಇದನ್ನೆ ತೀರಾ ಹತ್ತಿರದವರ ಸಾವು ಮಾತ್ರ ಹೃದಯ ಅಲುಗಾಡಿಸುತ್ತದೆಯಂದು. ಪೀಟರ್ ಇಲಿಚನ ಹೆಣ ನೋಡಿ ಹೇಳಿಕೊಳ್ಳುತ್ತಾನೆ, " ಸತ್ತವನು ನಾನಲ್ಲವಲ್ಲ !". ಹೌದು ಪ್ರತಿಯೊಬ್ಬ ಮನುಷ್ಯ ಹೀಗೆ ಹೇಳಿಕೊಳ್ಳುತ್ತಲೆ ಇರುತ್ತಾನೆ.
" ಕಾಯಿಲೆ ಮತ್ತು ಆರೋಗ್ಯ ಮಾತ್ರ ಅವನ ಆಸಕ್ತಿಯ ವಿಷಯಗಳಾದವು"- ನಾವೆಲ್ಲ ಆರಾಮಾಗಿ ಇದ್ದಾಗ ಯಾವುದರ ಬಗ್ಗೆಯು ಯೋಚಿಸುವುದೆಯಿಲ್ಲ. ನಮ್ಮ ಮನೆಯ ಅಜ್ಜಿಗೆ ನೋಡಿದಾಗಲೆಲ್ಲ ವಯಸ್ಸಾಯ್ತಲ್ಲ ನರಳ್ತಾರೆ ಅನಸುತ್ತೆ. ಆದರೆ ನಮಗೆ ಆ ನರಳಾಟ ಆದರೆ ನಮ್ಮ ಯೋಚನೆಯ ಲಹರಿಯೆ ಬದಲಾಗುತ್ತದೆ. ಇಲ್ಲಿಯು ಸಹ ಇಲಿಚ 45 ವಯಸ್ಸಿಗೆ ಸತ್ತವನು ಅವನದೆನು ಸಾಯುವ ವಯಸ್ಸಲ್ಲ.
"ಶುದ್ಧ ಮನಸ್ಸನ್ನು ಕಳೆದುಕೊಂಡಿರುವ ಹದಿಹರೆಯದ ಹುಡುಗರ ಕಣ್ಣಿನಂತೆ ಆ ಹುಡುಗನ ಕಣ್ಣು ನೀರು ತುಂಬಿದವು" - ತನ್ನ ಸ್ಥಿತಿ ಕಂಡು ಅಳುವ ಮಗನ ಬಗ್ಗೆ ಈ ರೀತಿ ಹೇಳುತಿದ್ದಾನೆ.
" ಮನುಷ್ಯನ ಸ್ವಭಾವಗಳ ಬಗ್ಗೆ ಅವನು ಒಪ್ಪಿಕೊಳ್ಳಬೇಕಾದ ಸತ್ಯಗಳ ಬಗ್ಗೆ ಈ ಕಥೆಯಲ್ಲಿ ಟಾಲಾಸ್ಟಾಯಿ ಮಾತಾಡುತ್ತಿದಾರೆ" . ನಾವೆಷ್ಟೆ ಜನರ ಸಾವು ನೋಡಿದಾಗಲೂ, ನಾನು ಭಿನ್ನ ಅದು ಹೇಗೆ ನನ್ನ ಸಾವಾಗುತ್ತದೆ ನಾನು ಅನಂತ ಎಂಬ ಉಡಾಫೆ ಇದ್ದೆ ಇರುತ್ತೆ, ಮನುಷ್ಯ ತನ್ನ ಬದುಕುವ ರೀತಿಗೆ ಸಮರ್ಥನೆಗಳನ್ನು ಇಲಿಚನಂತೆ ಕೊಟ್ಟುಕೊಳ್ಳುತ್ತಲೆ ಹೋಗುತ್ತಾನೆ. ಆದರೆ ಬದುಕಿನ ಸತ್ಯಗಳು ಒಪ್ಪಿಕೊಂಡಷ್ಟು ನಮ್ಮ ಬದುಕು ಸುಂದರ...
# ಕಪಿಲ .ಪಿ ಹುಮನಾಬಾದೆ
18/11/2017.