Thursday 17 May 2018

ಕಾವ್ಯಮನೆ ನಿರ್ದೇಶಕ ಚಾಂದರವರ ಪದ್ಯ..

ಮೋರಿ ಅಲೆ

ದನದ ಉಚ್ಚೆಯಲಿ ದಾರಿ ಮಾಡಿ,
ಕೆಚ್ಚಲಲಿ ಕಿರೀಟ ತೊಟ್ಟು,
ಬಾಯಿಯಲ್ಲ ಬಚ್ಚಲು ಮಾಡಿ
ಬಾಯ್ಬಡುಕೊಂಡು ಬಂತು ನೋಡಿ
ಚರಕ ಹಿಡ್ದನ್ ನರಕ ತೋರ್ಸಿ,
ಹೊಲ್ಸು ಬಾಯಲ್ ರಾಮನ್ ಕರ್ಸಿ
ಗೋಡ್ಸೆಗೆಲ್ಲ ಗುಡಿಯ ಕಟ್ಟಿ
ಕಂಡವರಿಗೆಲ್ಲ ಗೋರಿ ಕಟ್ಟ್ಸಿ
ಹೆಜ್ಜೆ ಇಟ್ಟಲೆಲ್ಲಾ ರಕ್ತದ ದಾರಿ
ನಮ್ಮೂರಿಗೂ ಬಂತೂ ನೋಡ್ರೋ ಮೋರಿ!

ಗೋಧ್ರಾ ಗಿದ್ರಾ ಮರತೇ ಇಲ್ಲ
ಸುಟ್ಕೊಂಡವರು ಬದ್ಕೇ ಇಲ್ಲ
ಆದ್ರೂ ಇವನೇ ರಾಜ ಅಂತೆ
ಕುರುಡರ್ ಊರಾಗ್ ಒಂದೇ ಲಾಟಿ ಅಂತೆ
ಖಾಕಿ ಚಡ್ಡಿ ಹುಡ್ಗ ಇವನು,  ಹೆಡ್ರೂ ಇದ್ರೂ ಬ್ರಹ್ಮಚಾರಿ!
ಮೊನ್ನೆ ಗಾಂಧಿ ಕಣ್ಣು ಕಿತ್ತಿ ಸ್ವಚ್ಚ ಭಾರತ್ ಮಾಡದವನಂತೆ!
ಅನ್ನಗಿನ್ನ ತಿನ್ನಕ್ಕಿಲ್ಲ ಅಣಬೆ ಅಂದೆ ಪ್ರಾಣ ಅಂತೆ!
ದನದ ಬಾಡು ಮುಟ್ಟೆ ಇಲ್ಲ ಕೊಟ್ಟರೇ ಬ್ಯಾಡ ಅನ್ನಲ್ಲವಂತೆ !

ದೇಶ ಆಳಾಕೆ ಬಂದ್ವನಂತೆ ವಿಶ್ವಗುರು ಆಗೌನಂಥೆ!
ಹೆಂಡ್ರು ಮಕ್ಳು ಇಲ್ದೇ ಇದ್ರೂ ಆಸ್ತಿಯಂತೂ ಭಾರಿಯಂತೆ!
ಬೇಂದ್ರೆ ಗಿಂದ್ರೆ ಅಂತನಂತೆ ಕವಿತೆಗಿವಿಗೆ ಹಾಡ್ತಾನಂತೆ
ಬಾಯಿ ಬಿಟ್ರೇ ಬಚ್ಚಲ್ ವಾಸನೆ ಡೆಟಾಯಿಲ್ ಪೆನಾಯಿಲ್ ಕೊಡಬೇಕಂತೆ !

ಭಾರತದಾಗೆ ಇವನ್ ಭಕ್ತರೂ ಭಾರಿ ಆವರೇ,
ಎದೆಯ ಸೀಳಿ ಇವ್ನ್ ಫೋಟೋ ತೋರ್ಸಾರಂತೆ!
ರಾಮ ಬಿಟ್ರೇ ನೆಟ್ಸೂ ಇವನೇ,
ಸೀತೆಯಂತೂ ಲೆಕ್ಕಕ್ಕಿಲ್ಲ
ಕಲಿಯುಗ್ದ್  ಕಾಮಧೇನು ಲೋಕ ಉದ್ದಾರ ಮಾಡ್ತಾನಂತೆ !
ಜೈಲೂರಪ್ಪ ಇವನ ಭಕ್ತ , ಮನೆಲಿ ಇವನ್ದೇ ಫೋಟೋ ಅಂತೆ
ಅವನ ಅಂಗಾಲೂ  ನೆಕ್ಕೋದರಲ್ಲಿ ನಾಯಿಗಿಂತ ಇವನೇ ಮೇಲಂತೆ !

ಈ ಮುದುಕನ ಬಾಯಲಿ ಹಲ್ಲೇ ಇಲ್ಲ ಆದ್ರೂ ರಾಜ್ಯ ಆಳ್ತಾನಂತೆ
103 ಕೆ ನಿಂತ್ತೆ ಬಿಟ್ಟಿದೆ, ಆದರೂ ಗದ್ದಿಗೆ ಅವನ್ದೇ ಅಂತೆ !
ಕಮಲ ಬಿಟ್ಟು  ಹೋಗಿದ್ದನಂತೆ ಒಡೆದ ತೆಂಗಿನ ಕಾಯಿ ಆಗಿದ್ನಂತೆ!
ಜೈಲಿಗೂ ಇವನ್ಗೂ ಭಾರಿ ಸದರಾ
ಆಗಾಗಾ ಹೋಗಿ ಬಂದು ಮಾಡ್ತಾನಂತೆ !

ಆಣೆ ಇಡಾಕೆ ಎಲ್ರೂ ಸತ್ರೂ
ರೈತರ್ರೂ ಇನ್ನೂ ಬದ್ಕೇ ಐವರೇ
ಅವರ ಮೇಲೂ ಆಣೆ ಮಡಗಿ ಐತು, ಮೈತ್ರಿ ಗಿತ್ರಿ ಒಪ್ಪಕ್ಕಿಲ್ಲ
ತನ್ನೇ ಮಾರ್ಕೊಂಡವನಂತೆ  ತಿರ್ಪೆವಾಲಾ!
ಗದ್ದಿಗೆಗೆ ಈಗ ನಾಯಿ ಬಂತು
ಊರು ಕೇರಿ ಎಲ್ಲ  ದನದ ಉಚ್ಚೇ ವಾಸನೆ
ಅದೇ ಬಾಯಲಿ ಒದರತಾ ಐತೇ ಒಂದೇ ಸಮನೆ
ಭಾರತ ಮಾತಕೀ ಅಂತೆ ಜೈ ಭಾರತ ಮಾತಾಕೀ ಜೈ.........ಅಂತೆ

                   #  ಕವಿಚಂದ್ರ