Saturday 30 September 2017

ಜಂಬಣ್ಣ ಅಮರಚಿಂತರ ಕಾದಂಬರಿ

ತೆರೆದ -ಮನ ( ಪುಸ್ತಕಭಿಪ್ರಾಯ)
ಬೂಟುಗಾಲಿನ ಸದ್ದು ( ಕಾದಂಬರಿ) - ಜಂಬಣ್ಣ ಅಮರಚಿಂತ.

ಯಾವುದೇ ಸೃಜನಶೀಲ ಬರವಣಿಗೆಯು ಓದುಗನಿಗೆ "ಅನುಭವಿಸುವಿಕೆಯನ್ನು" ಹುಟ್ಟಿಸುವಂತಿರಬೇಕು. ಒಂದು ಫಿಲ್ ಕೊಡಬೇಕು ಆ ಸ್ಪರ್ಶ ಓದುಗನೆದೆ ಸವರುತ್ತಲೆ ಇರಬೇಕು. ಆ ರೀತಿಯ ಕೃತಿಗಳು ಉತ್ತಮವಾಗುತ್ತವೆ. ಕಥೆ ಬರೆಯುವುದೆಂದರೆ ಬರೀ ಕಥೆ ಇಡುವುದಲ್ಲ. ಅದು ಓದುಗನ ಮನಸ್ಸೊಳಗೆ ಇನೆನೋ ಆಗಬೇಕಾದದ್ದು ಅದು ಇನೆನೋ ಆಗಬೇಕೆನ್ನುವುದು ಹೇಳಲಾರದಂತಹದಾಗಿರುತ್ತದೆ ಅದು ಅನುಭವಿಸಬೇಕಷ್ಟೆ. ಹೀಗಂದ ಮಾತ್ರಕ್ಕೆ ಕುತೂಹಲ ಹುಟ್ಟಿಸುವ ಅಥವಾ ಪತ್ತೇದಾರಿ ಕಥೆಗಳಂತಲ್ಲ. ತೇಜಸ್ವಿಯವರ ಲಿಂಗ ಬಂದ ಕಥೆಯೆ ಗಮನಿಸಿ ಅಥವಾ ಇನ್ಯಾವುದೇ ದೊಡ್ಡ ಲೇಖಕನ ಬರಹ ಗಮನಿಸಿದಾಗ ಅದರೊಳಗೆ ಓದುಗನಿಗೆ ಒಂದು ರೀತಿಯ ಅನುಭವಿಸಿಕೆ ಉಂಟು ಮಾಡುವ ಗುಣವಿರುತ್ತದೆ.

ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ ,ಜಂಬಣ್ಣ ಅಮರಚಿಂತರ ಕುರುವಯ್ಯ ಮತ್ತು ಅಕುಂಶದೊಡ್ಡಿ ಕಾದಂಬರಿಗಿರುವ ಒಂದು ರೀತಿಯ ದಟ್ಟತನದ ಕಥಾಹಂದರ ಬೂಟುಗಾಲಿನ ಸದ್ದಿಗಿಲ್ಲ. "ಚದುರುರಿದ ಕಥೆಯಿದೆ". ಇದರಾಚೆಗೂ ಇದು ತನ್ನದೇ ವಿಶೇಷತೆ ಮತ್ತು ಮಹತ್ವ ಹೊಂದಿದೆ. ಹೈದರಾಬಾದ ಕರ್ನಾಟಕದಲ್ಲಿ  ರಜಾಕರರು ಮಾಡಿರುವ ಅನಾಚಾರಗಳು, ದಾಳಿ, ಹಿಂಸೆಯನ್ನು ಈ ಕೃತಿ ಬಿಚ್ಚಿಡುತ್ತದೆ.

" ಈ ಪ್ರಾಂತ್ಯದ ಒಟ್ಟು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಗ್ರಹಿಸುವ ಕಥನ ಬಂದಿಲ್ಲ. ಬರುವ ಅಗತ್ಯವಿದೆ. ಬೂಟುಗಾಲಿನ ಸದ್ದು ಒಂದು ಪ್ರಯತ್ನವಷ್ಟೆ. ಇದು ಬರೆಯುವವರಿಗೆ ಪ್ರೇರಣೆ ನೀಡಲೆಂದು ಆಶಿಸುತ್ತೇನೆ"- ಮುನ್ನುಡಿ ಬರೆಯುತ್ತ ನುಗಡೋಣಿಯವರು ಆಡಿರುವ ಮಾತುಗಳಲ್ಲಿ ನನಗೆ " ಅಗತ್ಯವಿದೆ " ಎನ್ನುವ ಪದವೆ ಎದ್ದು ಕಾಡುತ್ತಿದೆ.

ಶಾಂತರಸದ ಬಡೇಸಾಬನ ಪುರಾಣದಂತಹ ಕಥೆ ತೀರಾ ರಜಾಕರ ಆಳ್ವಿಕೆ ನೆಪವಾಗಿಟ್ಟುಕೊಂಡು ಬಂದ ಕಥೆ. ರಜಾಕರರ ಹುಟ್ಟುವಿಕೆ ಮತ್ತು ನಿರ್ಗಮನದ ಮಧ್ಯೆ ಇರುವ ಕಥನವದು. ಲಂಕೇಶರವರ ದಾಳಿ ಕಥೆ ಸಂಕೀರ್ಣವಾಗಿದ್ದು. ಹತ್ತು ಹಲವು ಅಂಶಗಳು ಹೇಳುತ್ತದೆ. ಪ್ರೇಮ, ಕಾಮ, ದಾಳಿಯ ದಾಹ, ಸಂಶಯ, ಒಗ್ಗಟ್ಟು  ಎಲ್ಲವೂ ಬಿಚ್ಚಿಡುತ್ತದೆ.
ಈ ಸಾಲಿಗೆ ಬೂಟುಗಾಲಿನ ಸದ್ದು ಸಹ ಸೇರಬಹುದಷ್ಟೆ. ಇದರ ಮಧ್ಯೆಯು ಸಂತನ ಸವಾರಿ, ಮಡಿಬಟ್ಟೆ, ಕಚೇರಿಯಲ್ಲಿ ಕತ್ತೆಗಳು ಈ ಕಥಾಭಾಗಗಳು ತಮ್ಮದೆ ಅಸ್ಮಿತೆ ಹೊಂದಿವೆ. ಒಂದು ಸಾಮಾನ್ಯ ಅಗಸನ ಕುಟುಂಬದ ಮೂಲಕ ಒಟ್ಟು ಚಿತ್ರಣ ನೋಡಲು ಹೋಗಿ ಇನೆನೋ ಆಗಿದೆ. ಅದಕ್ಕೆ ಲೇಖಕನ ಬದುಕಿನ ವೈಯಕ್ತಿಕ ಕಾರಣಗಳು ಸಹ ಇವೆ.

ಮರೀಜ್ ಭಿ ತುಮ್ಹೀ ಹೋ
ಹಕೀಮ್ ಭಿ ತುಮ್ಹಿ ಹೋ
ನಸ್ ಕೋ ಪಕಡು ಲೊ, ಔರಜಾನೋ
ತುಮ್ಹೆ ಬೀಮಾರಿ ಕ್ಯಾ ಹೈ
ಇಸ್ ಬಿಮಾರಿ ಕಾ ದವಾಭಿ ತಮ್ಹಿ ಹೋ
ಔರ್ ದುವಾಭಿ ತುಮ್ಹೀ ಹೋ.
(ಪುಟ ನಂ-27.)
ಸಂತನ ಸವಾರಿಯಲ್ಲಿ ಮಾಸುಂಅಜ್ಜ ಆಡುವ ಮಾತುಗಳಿವು ಇದು ಊರವರಿಗೆ ಒಗ್ಗಟ್ಟಾಗಿಸಲು ಸೂಫಿಶರಣರ ಮಹತ್ವ ಸಾರುತ್ತದೆ.

"ಹಗಲು ಕಪ್ಪನೆ ಬುರಖಾ ಧರಿಸಿದಂತೆ ಕಾಣುತ್ತಿತ್ತು. ಕಾರ್ಮೋಡಗಳು ಮದವೇರಿದ ಅನೆಯಂತೆ ಮುಗಿಲು ತುಂಬಾ ಓಡಾಡುತ್ತಾ ಡಿಕ್ಕಿ ಹೊಡೆಯುತ್ತಾ ಗುಡುಗುತ್ತಿದ್ದವು. ಚಕಚಕನೆ ಮಿಂಚು, ಖಡಲ್ ದಡಲ್ ಎಂದು ಸಿಡಿಲು ಜೊತೆಗೂಡಿ ಗುಡುಗು ಅರ್ಭಟಿಸುತ್ತಿತ್ತು" ರೂಪಕತ್ಮಕವಾಗಿ ರಜಾಕರರ ದಾಳಿಯ ಮುನ್ಸೂಚನೆಯನ್ನು ಬರೆಯುತ್ತಾರೆ.

ಒಟ್ಟಾರೆ ಕಾದಂಬರಿ ಕೋಮು ಸೌಹಾರ್ದತೆ ಬಗ್ಗೆ ಹೇಳುತ್ತದೆ. ರಜಾಕರರ ನಂತರ ಹಿಂದೂಗಳ ಆಕ್ರೋಶಕ್ಕೆ ಸತ್ತ ಮುಸ್ಲಿಂರೆಷ್ಟೋ ? . ಇಲ್ಲಿ  ಮದರಸಾಬು ಎನ್ನುವ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಸಹಾಯ ಮಾಡಿದ್ದರ ಬಗ್ಗೆ ಸಹ ಇದೆ. ಇವೆಲ್ಲ ಅಂಶಗಳು ಗಮನಿಸಿದಾಗ ಕೆಲವೆ ಕೆಲವು ಮುಸ್ಲಿಂರು ರಜಾಕರಾಗಿದ್ದು ಇವರೆ ಇದೆಲ್ಲ ಅನಾಚಾರ ಮಾಡಿದರು. ಒಟ್ಟಾರೆಯಾಗಿ  ಒಂದು ಕೋಮುವನ್ನು ದ್ವೇಷಿಸುವುದು ಮೂರ್ತನವಾಗಿದೆ ಎನ್ನುವುದೆ ಕಾದಂಬರಿ ಧ್ವನಿಸುತ್ತದೆ. ರಜಾಕರರ ವಿರುದ್ಧ ಕೆಳವರ್ಗದವರಿಗೆ ಹೋರಾಡಲು ಹಚ್ಚಿ ತಾವು ಭಧ್ರವಾಗಿದು ಮುಂದೆ ರಾಜಕೀಯದಲ್ಲಿ ಸಹ ಪ್ರವೇಶ ಪಡೆದ ಮೇಲ್ವರ್ಗದವರ ಕುತಂತ್ರ ಬಿಚ್ಚಿಡುವ ಕಥೆ ಸಹ ಇದಾಗಿದೆ. ಅನೇಕ ಮಾನವೀಯ ಮೌಲ್ಯಗಳಿಟ್ಟುಕೊಂಡಿರುವ ಇದು ಕಲಾತ್ಮಕತೆಯ ಹೆಣಿಗೆಯಲ್ಲಿ ಅಲ್ಪಸ್ವಲ್ಪ ಸೋತಿದರು ಕನಿಷ್ಠ ನಾಲ್ಕೈದು ಕಥಾಭಾಗ ಓದಲಿಕ್ಕಾದರೂ ಓದಲೆಬೇಕಾದ ಪುಸ್ತಕ ಇದು...

# ಕಪಿಲ್ ಪಿ .ಹುಮನಾಬಾದೆ.
30/9/2017.

Thursday 28 September 2017

ಪಲ್ಲವ ಪ್ರಕಾಶನ ಪುಸ್ತಕಗಳು

"ಪುಸ್ತಕ ಮನೆ" ( ಆನ್ಲೈನ್ ಪುಸ್ತಕ ಮಾರಾಟ) - . ನಿಮಗೆ ಪೊಸ್ಟ್ ಮುಖಾಂತರ ಪುಸ್ತಕ ಕಳುಹಿಸುತ್ತೆವೆ.

ಪಲ್ಲವ ಪ್ರಕಾಶನ: -

1. ಬಾಳ ಕೌದಿ ( ಅಂಕಣ ಬರಹ) - ಕೆ ನೀಲಾ.

2. ಇಂತಿ ನಮಸ್ಕಾರಗಳು - ನಟರಾಜ್ ಹುಳಿಯಾರ್ .

3. ತಾಯಿಕಾಡು ಸಿ.ಕೆ ಜಾನು ಅಷಮಗ್ರ ಆತ್ಮಕಥೆ - ಬಿ. ಸುಜ್ಞಾನಮೂರ್ತಿ.

4.ಭೌದ್ಧ ಮಹಾ ಮಹಿಳೆಯರು - ಡಾ. ವೆಂಕಟಯ್ಯ ಅಪ್ಪಗೆರೆ

5.ನೆತ್ತಿ ಮೇಗಳ ನೀರು ( ಕವನ ಸಂಕಲನ) -ಡಾ ನಾಗಣ್ಣ ಕಿಲಾರಿ.

6. ನಾದಗಳು ನುಡಿಯಾಗಲೇ - ವಿಕ್ರಮ ವಿಸಾಜಿ ( ಚಂದ್ರಶೇಖರ ಕಂಬಾರರ ಕಾವ್ಯದ ಕುರಿತು)

7. ನನ್ನೊಳಗಿನ ನಿನ್ನ ನಡಿಗೆ - ನೇರೊಡನ ಪದ್ಯಗಳನುವಾದ :- ಜ ನಾ ತೇಜಶ್ರೀ.

8. ಅನುಭಾವಿಗಳ ಕ್ರಾಂತಿ  - ಜೆ.ಪಿ. ಶೌತನ್.

9. ಬೆಂಚಿಲ್ ರಸ್ತೆಯ ಕವಿತೆಗಳು - ಆನಂದ ಝಂಜರವಾಡ.

ಹನುಮಂತ ಹಾಲಿಗೇರಿಯವರ ಪುಸ್ತಕಗಳು..

1. ಮಠದ ಹೋರಿ ( ಕಥಾಸಂಕಲನ) - ಹನುಮಂತ ಹಾಲಿಗೇರಿ. - 180 ರೂಪಾಯಿ.

2. ಗೆಂಡೆದೇವ್ರು - ಕಥಾಸಂಕಲನ,  ಹನುಮಂತ ಹಾಲಿಗೇರಿ,  100 ರೂಪಾಯಿ.

3. ಕೆಂಗುಲಾಬಿ  (ಕಾದಂಬರಿ) - ಹನುಮಂತ ಹಾಲಿಗೇರಿ. 110 ರೂಪಾಯಿ.

4. ಊರು ಸುಟ್ಟರೂ ಹನುಮಪ್ಪ ಹೊರಗೆ ( ನಾಟಕ) - ಹನುಮಂತ ಹಾಲಿಗೇರಿ.  75 ರೂಪಾಯಿ.

6. ಅಲೆ ತಾಕಿದರೆ ದಡ - ವಾಸುದೇವ್ ನಾಡಿಗ್  (ಕವನ ಸಂಕಲನ) - 90 ರೂಪಾಯಿ.

7. ತಮಂಧದ ಕೇಡು - ಅಮರೇಶ ನುಗಡೋಣಿ,  150 ರೂಪಾಯಿ.

8. ಆರಿಫ್ ರಾಜಾರವರ ಎರಡು ಕವನ ಸಂಕಲನಗಳು 200 ರೂಪಾಯಿ

9 ಗಾಂಧಿ ಬಂದ ( ಕಾದಂಬರಿ) - ಎಚ್ ನಾಗವೇಣಿ,  240 ರೂಪಾಯಿ

ಆಡು ಕಾಯುವ ಹುಡುಗನ ದಿನಚರಿ - ಟಿ ಎಸ್ ಗೊರವ. 100 ರೂಪಾಯಿ

ರೊಟ್ಟಿ ಮುಟಗಿ - ಟಿ ಎಸ್ ಗೊರವ.70 ರೂಪಾಯಿ

ಪಲ್ಲವ ಪ್ರಕಾಶನದ ಪುಸ್ತಕಗಳ ಪಟ್ಟಿ

1, ಜಂಗಮ ಫಕೀರನ ಜೋಳಿಗೆ ( ಕವನ ಸಂಕಲನ) ಆರಿಫ್ ರಾಜಾ

2 ಬೆಂಕಿಗೆ ತೊಡಿಸಿದ ಬಟ್ಟೆ ( ಕವನ ಸಂಕಲನ ) ಆರಿಫ್ ರಾಜಾ

3 ಬನದ ಹುಣ್ಣಿಮೆ ( ಕಥಾ ಸಂಕಲನ )
ಅಬ್ಬಾಸ್ ಮೇಲಿನಮನಿ

4 ಭಾವಭಿತ್ತಿಯ ಚಿತ್ರಗಳು ( ಕಥಾ ಸಂಕಲನ) ಟಿ ಕೆ ತ್ಯಾಗರಾಜ

5 ಹೊಕ್ಕಳ ಋತುಗಾನ (ಕವನ ಸಂಕಲನ )
ಎಸ್ ಜಿ ಸಿದ್ದರಾಮಯ್ಯ

6 ಇಂತಿ ನಮಸ್ಕಾರಗಳು - ಪಿ ಲಂಕೇಶ್ ಕುರಿತು ಲೇಖಕ ನಟರಾಜ್ ಹುಳಿಯಾರ

7 ಕುದುರಿ ಮಾಸ್ತರ - ಟಿ ಎಸ್ ಗೊರವರ ( ಕಥಾಸಂಕಲನ )

8 ಅಸಮಗ್ರ - ರಾಜೇಂದ್ರ ಚೆನ್ನಿ

9 ನನ್ನಿಷ್ಟ , ರಾಮ್ ಗೋಪಾಲ್ ವರ್ಮಾ ಸಿನಿಮಾಯಾನ

10 ಆಡು ಕಾಯೋ ಹುಡುಗನ ದಿನಚರಿ - ಟಿ ಎಸ್ ಗೊರವರ ( ಅನುಭವ ಕಥನ) ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೃತಿ

ಈ ಪುಸ್ತಕಗಳಲ್ಲದೆ ಹೆಚ್ಚಿನ ಪುಸ್ತಕಗಳ ಮಾಹಿತಿಗೆ

ಪಲ್ಲವ ಪ್ರಕಾಶನ

11. ಕಾಲಕನ್ನಡಿ - ಚಿದಾನಂದ ಸಾಲಿ
( ಸಂದರ್ಶನಗಳು ವ್ಯಕ್ತಿಚಿತ್ರಗಳು)

12.ಕ್ಯಾಮರಾ ಕಣ್ಣಲ್ಲಿ ರಾಜ್
- ಭವಾನಿ ಲಕ್ಷ್ಮೀನಾರಾಯಣ

13. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ
(ಕವನ ಸಂಕಲನ ) ಬಿ ಪೀರ್ ಬಾಷಾ

14 ಮಗದೊಮ್ಮೆ ನಕ್ಕ ಬುದ್ಧ - ಆನಂದ ಋಗ್ವೇದಿ ಕತೆಗಳು

15.ಮಧ್ಯಕಾಲೀನ ಕರ್ನಾಟಕದಲ್ಲಿ ದಲಿತರು
- ಡಾ ಓ ದೇವರಾಜ

16.ಸಾವಿತ್ರಿಬಾಯಿ ಫುಲೆ- ಸುಜ್ಞಾನಮೂರತಿ

17 ದೂರ ತೀರ - ಅನುಪಮಾ ಪ್ರಸಾದ

18 ಸಮಗ್ರ ಸಂಶೋಧಕ ಎಂ ಎಂ ಕಲಬುರಗಿ
- ಮೃತ್ಯುಂಜಯ ರುಮಾಲೆ

19 ಹೊಳೆಗುಂಟ ನಡೆದ ಹುಡುಗಿ '(ಕವನ ಸಂಕಲನ)
- ಡಾ ಸಿ ರವೀಂದ್ರನಾಥ

20, ಮುಗಿಲ ಮಾಯೆಯ ಕರುಣೆ - ಪಿ ಮಂಜುನಾಥ

21 ಧರೆ ಹತ್ತಿ ಉರಿದರೆ- ಡಾ ಟಿ ಆರ್ ಚಂದ್ರಶೇಖರ್

22 ಸೂರ್ಯ ಸಮುದ್ರದಲ್ಲಿ ಮುಳುಗುವುದಿಲ್ಲ - ಚಂದ್ರಶೇಖರ್ ಆಲೂರು

23 ಯಾಕೆ ಕಾಡುತ್ತಿದೆ ಸುಮ್ಮನೆ ನನ್ನನು (ಅಂಕಣ ಬರಹಗಳು ) - ಎನ್ ಸಂಧ್ಯಾರಾಣಿ

24 ವಾಹ್ ! ಮೀಡಿಯಾ  (ಅಂಕಣ ಬರಹಗಳು )
- ಜಿ ಎನ್ ಮೋಹನ್

25 ನಿಜಸ್ವಪ್ನ- ಎಚ್  ಆರ್ ರಮೇಶ್

26 ಭಾರತ ಭಾಗ್ಯ ವಿಧಾತ ( ಕಥಾಸಂಕಲನ )
- ಮಹಾಂತೇಶ ನವಲಕಲ್

27.ಜುಲುಮೆ ( ಕವನ ಸಂಕಲನ ) ರಮೇಶ್ ಅರೋಲಿ

28 .ಕರಿಮೆಣಸಿನಗಿಡ( ಕಾದಂಬರಿ )
ತೆಲುಗಿನಲ್ಲಿ - ಡಾ ವಿ ಚಂದ್ರಶೇಖರ
ಕನ್ನಡ - ಸೃಜನ್

29 ಅಸಮಗ್ರ- ರಾಜೇಂದ್ರ ಚೆನ್ನಿ

30. ಬೂಟುಗಾಲಿನ ಸದ್ದು - ಜಂಬಣ್ಮ ಅಮರಚಿತ

31. ಚರಿತ್ರೆ ಕಥನ- ಡಾ ಕೆ ಮೋಹನಕೃಷ್ಣ ರೈ

32 ಕಥೆ ಎಂಬ ಇರಿವ ಅಲಗು- ಮಂಜುನಾಥ ಲತಾ

33. ಬಲಿಹಾರ ( ಕಾದಂಬರಿ) - ಚೀಮನಹಳ್ಳಿ ರಮೇಶಬಾಬು.

34. ಹದ ( ಕಾದಂಬರಿ) - ಚೀಮನಹಳ್ಳಿ ರಮೇಶಬಾಬು.

35. ಬುತ್ತಿ( ಬಾಲ್ಯ ಅನುಭವ ಕಥನ)  - ಅಮರೇಶ ನುಗಡೋಣಿ

36. ಜೋಗತಿ ಜೋಳಿಗೆ - ಅನುಪಮಾ ಪ್ರಸಾದ್.

- ಸಂಪರ್ಕಿಸಿ
ಪುಸ್ತಕ ಮನೆ:-
📞 7829464653
ಪುಸ್ತಕ ಮನೆ 7829464653

ಕೊರಿಯರ್ ಮುಖಾಂತರ ಅಥವಾ ಪೊಸ್ಟ್ ಮುಖಾಂತರ ಪುಸ್ತಕ ಕಳುಹಿಸಲಾಗುವುದು. ನೀವು ನಮ್ಮ  ಅಕೌಂಟಗೆ ಹಣ ಹಾಕಿ ಅಥವಾ ಮನಿಯಾರ್ಡರ್ ಮಾಡಿ. ಪುಸ್ತಕ ಕೊಂಡು ಪ್ರೋತ್ಸಾಹಿಸಿ.  ನಿಮಗೆ ಬೇಕಾದ ಪುಸ್ತಕಗಳು ಕಾಮೆಂಟ್ ಮಾಡಿ.

Tuesday 26 September 2017

ತೆರೆದ-ಮನ ( ಪುಸ್ತಕಭಿಪ್ರಾಯ)

ಹೆಬ್ಬಾವಿನೊಡನೆ ಹೋರಾಟ - ಪ್ರದೀಪ್ ಕೆಂಜಿಗೆ.

" ಮೇಲು ನೋಟಕ್ಕೆ  ಇದು ಸರಳವೆಂಬಂತೆ ತೋರಿ ದಿಕ್ಕು ತಪ್ಪಿಸುವ ಕೃತಿ. ಆದರೆ ಗಮನವಿಟ್ಟು ನೋಡಿದರೆ , ಈ ಲೋಕದ ಒಳ ಸೂಕ್ಷ್ಮಗಳನ್ನು ಅರಿಯುವ ಲೇಖಕನ ಆಶಯ ಕಾಣದಿರದು" - ಎಸ್ ಆರ್ ವಿಜಯಶಂಕರರು ಮುನ್ನುಡಿಯ ಕೊನೆಗಾಡಿರುವ ಈ ಮಾತುಗಳೆ ಸಾಕು ಈ ಪುಸ್ತಕ ಓದಿದವನಿಗೆ ಸಮಾಧಾನ ಪಡಿಸಲು.

ಈ ಹಿಂದೆ ಪ್ರದೀಪ್ ಅವರ ಅದ್ಭುತ ಯಾನ, ಪ್ಯಾಪಿಲಾನ್ ( ಭಾವಾನುವಾದ) ಓದಿದವರಿಗೆ " "ಹೆಬ್ಬಾವಿನೊಡನೆ ಹೋರಾಟ" ಎನ್ನುವ ಶಿರ್ಷೀಕೆ ಕುತೂಹಲ ಹುಟ್ಟಿಸದೆ ಇರದು. ವಿಚಿತ್ರ ಕುತೂಹಲಕ್ಕೆ ಬಿದ್ದೆ ಈ ಪುಸ್ತಕ ಕೊಂಡೆ. ಆದರೆ ಇಲ್ಲಿ ಯಾವುದೇ ಕುತೂಹಲ ಕೇರಳಿಸುವ ಅಂಶಗಳಾಗಲಿ ಅಥವಾ ಕುರ್ಚಿಯ ತುದಿಗೆ ಕೂತು ಕ್ಷಣಕ್ಷಣಕ್ಕೂ ಜಾರುತ್ತ ಪುಸ್ತಕದೊಳಗಿಳಿಯುವ ಪುಸ್ತಕವೆನ್ನಲ್ಲ.

ಇದಾರೆಚೆಗೂ ಇದು ನನಗೆ ಹಲವು ಕಾರಣಗಳಿಂದ ಮುಖ್ಯವಾಗುತ್ತದೆ. ವಿಜ್ಞಾನವೆಂದರೆ ಸಾಕು ಯಂತ್ರಗಳೆಂದು ತಿಳಿದುಕೊಂಡಿದ್ದೆವೆ . ಒಂದರ್ಥದಲ್ಲಿ ಮನುಷ್ಯನಿಗೆ ಆರಾಮಾಗಿಡುವ ವಸ್ತುಗಳನ್ನೆಲ್ಲವನ್ನು ವಿಜ್ಞಾನದವಿಷ್ಕಾರಗಳೆಂದು ಉನ್ನತವಾದ ಸ್ಥಾನ ಕೊಟ್ಟಿದ್ದೆವೆ. ನಮ್ಮ ಕಾಡು, ಸುತ್ತಲಿನ ಗಾಳಿ, ನೀರಿನ ಬಗ್ಗೆ ಯೋಚಿಸುವುದೆ ಇಲ್ಲ. ಇಲ್ಲಿ ಕೆಂಜಗೆ ಆ ಕೆಲಸ ಮಾಡಿದ್ದಾರೆ.

ಜಾರ್ಜ್ ಎನ್ನುವ ವ್ಯಕ್ತಿಯೊಬ್ಬನ ಮೇಲೆ ಕತ್ಲೇಕಾನಿನಲ್ಲಿ ಹೆಬ್ಬಾವೊಂದು ಅಟ್ಯಾಕ್ ಮಾಡಿದೆ ಎನ್ನುವ ಸಂಗತಿಯನ್ನು ಶೋಧಿಸಲು ಹೋಗುವುದೆ ನಿರೂಪಕನ ಕೆಲಸ. ಭಾರತದಲ್ಲಿಯೆ ಇಲ್ಲಿವರೆಗೂ ಹೆಬ್ಬಾವೊಂದು ಮನುಷ್ಯನ ಮೇಲೆ ಎರಗಿದ ವರದಿಗಳಿರಲಿಲ್ಲ. "ಉಳಿದವರು ಕಂಡಂತೆ" ಎನ್ನುವ ದೃಷ್ಟಿಯಲ್ಲಿ ಕಥನ ಸಾಗುತ್ತದೆ. ಜಾರ್ಜನ ಮೇಲೆ ಹೆಬ್ಬಾವೊಂದು ಎರಗಿದ್ದ ಸಂಗತಿ ಕುರಿತು  ಉಳಿದವರು ಕಾಣುವ ರೀತಿ ಮತ್ತು  ಈ ಘಟನೆ ಕುರಿತು ಅವರ ವ್ಯಾಖ್ಯಾನಗಳೆ ಈ ಕಾದಂಬರಿಯಾಗಿದೆ.

ಕೆಲವರಿಗೆ ಇದು ಕಟ್ಟು ಕಥೆ ಎನಿಸಿದರೆ , ಯಾರೋ ಒಬ್ಬ ಅದು ನಿಧಿ ಕಾಯಲು ಕುತ್ತಿತ್ತು ಇವ ಅಲ್ಲಿ ಹೋಗಿದ್ದಾಗ ಹೆಬ್ಬಾವು ಎರಗಿತು ಅಂತ ಹೇಳಿದ. ಜಾರ್ಜ್ನ ಹೆಂಡತಿ ಮಾತು ಮರೆತು ಅತ್ತಳಷ್ಟೆ. ಕೆಲವರಿಗಂತೂ ಅದರ ಬಗ್ಗೆ ಮಾತಾಡಿದರೆ ನಮ್ಮ ಮೇಲೆರಗುತ್ತದೆ ಏನೋ ಎನ್ನುವ ಭಯ. ನಿರೂಪಕನು ಕತ್ತಲಲ್ಲಿ ಬಾತರೂಮಗೆ ಹೋದಾಗ ಅಲ್ಲಿ ಇಳಿಬಿಟ್ಟ ರಬ್ಬರ್ ಪೈಪನ್ನು ಸಹ ಹೆಬ್ಬಾವೆಂದು ತಿಳಿದು ಅದರ ಕುತ್ತಿಗೆ ಭಾಗವೆಂದು ಯಾವುದೋ ನಿರ್ಧರಿಸಿಕೊಂಡು ಅದನ್ನು ಜೋರಾಗಿ ಒತ್ತುತಾನೆ. ಭಯ, ಸಂಶಯ, ಗಾಳಿಸುದ್ಧಿಗಳೆಲ್ಲ ಸೇರಿ ಸತ್ಯ ಅಸತ್ಯತೆಯೆ ಮರೆತು ಹೋಗುತ್ತದೆ.

ತೇಜಸ್ವಿಯವರ ಆಪ್ತ ಒಡನಾಟದಲ್ಲಿದ್ದ ಕೆಂಜಗೆ ಅವರಿಗೆ ಅವರ ಪ್ರಭಾವ ಬಿಡಿಸಿಕೊಳ್ಳಲಾಗಿಲ್ಲವೆಂಬಂಶ ನಾವು ಇಲ್ಲಿ ಸಹ ನೋಡಬಹುದು. ಕೆಲವು ಸಾಲುಗಳು ಸಹಜವಾಗಿ ನಗು ಉಕ್ಕಿಸುತ್ತವೆ.
"ನಿನ್ನ ಕಾರಿನ ಹಾರ್ನ್ ಬಿಟ್ಟರೆ ಬೇರೆ ಎಲ್ಲಾ ಪಾರ್ಟುಗಳು ಶಬ್ಧ ಮಾಡುತ್ತವೆ. ಇದರಲ್ಲಿ ಅಷ್ಟು ದೂರ ಹೋಗೋದ ?...

ಒಟ್ಟಾರೆ ಕಾದಂಬರಿ ಹಲವು ಸಂಗತಿಗಳು ಒಳಗೊಂಡು ಟಿಸಿಲೊಡಿದಿದೆ. ಪ್ರಚರದ ಗೀಳಿಗೆ ಬಿದ್ದು ಪ್ರದರ್ಶನದ ಪರಿಸರದ ಹೋರಾಟ, ಮಲೆನಾಡಿನ ಹಸಿರು ಬರಿದಾಗುತ್ತಿರುವ ಬಗ್ಗೆ , ಕೃಷಿ ಭೂಮಿಗೆ ಭಾರ ಹಾಕಿ ಹೆಚ್ಚು ಫಸಲು ತೆಗೆಯುವ ಬಗ್ಗೆ,  ಆಧುನಿಕಯ ಭರಾಟೆಯಲ್ಲಿ ಮನುಷ್ಯನ ಸಂಬಂಧಗಳು ತೆಳುವಾಗುತ್ತಿರುವುದರ ಹಾದಿಗಳು ಇತ್ಯಾದಿ.

ಇದರ ಮಧ್ಯೆ  ಒಂದು ಸಂಗತಿ ಬರುತ್ತೆ. - "ಪರಸ್ಪರ ಬೇರೆಯಾಗಿರುವ ಗಂಡುಹೆಣ್ಣು ಕತ್ಲೆಖಾನೆನ್ಸಿಸ್ ಮರಗಳ ನಡುವೆ ಪರಾಗಸ್ಪರ್ಶ ಮಾಡಬಲ್ಲ ಏಕ ಮಾತ್ರ ಜೀವಿಗಳಾದ ಮಲಬಾರಿಕಾ ಚಿಟ್ಟೆಗಳ ಕುರಿತು ಮಾತುಗಳು ಇಂಟರೆಸ್ಟಿಂಗ್ ಅನಿಸುತ್ತವೆ.

ಇದೊಂದು ರೀತಿಯಲ್ಲಿ ಕಾಡುಹರಟೆ ಇದ್ದ ಹಾಗಿದೆ ಆದರೂ ಚಿಂತನೆಯಿದೆ. ಹೊಸ ವಿಚಾರಗಳಿವೆ.  ತುಂಡು ಮೋಡಗಳೆಲ್ಲ ಅಲಲ್ಲಿ ಮಳೆ ಸುರಿಸಿದಂತೆ.

"ಪ್ರಕೃತಿಯ ಜೊತೆ ದೈಹಿಕ ಗುದ್ದಾಟಕ್ಕೆ ಸಾಕಷ್ಟು ಹತ್ಯಾರುಗಳಿವೆ. ಅದನ್ನು ಮನುಷ್ಯ ಇನ್ನಷ್ಟು ಮತ್ತಷ್ಟು ಬೆಳೆಸುತ್ತಲೂ ಇದ್ದಾನೆ. ಆದರೆ ಪ್ರಕೃತಿಯ ಗೂಢವನ್ನು ಭೇಧಿಸಬೇಕಾದ್ದು ಮನುಷ್ಯ ತನ್ನ ಮನಸ್ಸಿನ ಶಕ್ತಿಯಲ್ಲಿ "- ಎಸ್ ಆರ್ ವಿಜಯಶಂಕರ ಅವರ ಈ ಮಾತು ಕಾಡುತ್ತದೆ. ಒಂದು ರೀತಿಯಲ್ಲಿ ಈ ಕಾದಂಬರಿ ನೋಡುವ ಕಣ್ಣುಗಳಿಗೆ ದುರ್ಬಿನ ಇದ್ದ ಹಾಗಿದೆ...

ಈಷಿಯ ಕಥೆ :-  ಇದೆ ಪುಸ್ತಕದಲ್ಲಿರುವ ಒಂದು ಕಥೆ ಇದು. ರೆಡ್ ಇಂಡಿಯನ್  ಒಬ್ಬ ಕಾಡು ತಪ್ಪಿ ನಾಡು ತಲುಪಿ ವಾಷಿಂಗ್ಟನ್ ಮ್ಯೂಸಿಯಂನಲ್ಲಿಡ್ಪಟ್ಟಿದ್ದು. ನಾಗರಿಕ ಸಮಾಜದ ದಾಳಿಗೆ ತುತ್ತಾಗಿ ಕಾಡಲ್ಲಿ ಅಲೆದು ಅದು ಹೇಗೊ ನಗರದ ಮಧ್ಯೆ ಬೆತ್ತಲೆಯಾಗಿ ಕೈಯಲ್ಲಿ ಗನ್ ಹಿಡಿದು ನಿಂತವನು. ಕಾಲಾಂತರದಲ್ಲಿ ಅವ ಇಂಗ್ಲಿಷ್ ಕಲಿತು. ಮನುಷ್ಯನಿಗೆ ಆರಾಮಾಗಿಡುವ ಎಲ್ಲಾ ತಂತ್ರಜ್ಞಾನಗಳ ಬಗ್ಗೆ  ಅತೀ ಪ್ರೀತಿ ಹೊಂದಿ ಅಮೇರಿಕಾದಲ್ಲಿಯೆ ಉಳಿಯುವ ಕಥೆ. ಈ ಹಿಂದೆ ಪಲಾಯನವೆ ಅವನ ಕೆಲಸವಾಗಿತ್ತು. ಕಾಡಿನಲ್ಲಿಯೆ ದೊಡ್ಡವನಾದವನು. ಈ ಕಥೆ ಬಹಳ ಸಂಕೀರ್ಣವಾಗಿದ್ದು ಬೇರೆ ಬೇರೆ ಅರ್ಥಸಾಧ್ಯತೆಗಳು ಹುಟ್ಟಿಸುತ್ತದೆ. ತನ್ನವರಿಂದ ದೂರ ಮಾಡಿದ ನಾಗರಿಕ ಮನುಷ್ಯರ ಮಧ್ಯೆಯೆ ಕೊನೆ ಉಸಿರೆಳೆದವನ ಕಥೆ.

# ಕಪಿಲ ಪಿ ಹುಮನಾಬಾದೆ.
26/9/2017

Thursday 14 September 2017

ಹುಲಿಯೂರಿನ ಸರಹದ್ದುವಿನ ಸೋಮು...

– ಕಪಿಲ ಪಿ ಹುಮನಾಬಾದೆ

ವರ್ತಮಾನದ ಯಾವುದೇ ವಿಷಯಗಳಿರಲಿ ತೇಜಸ್ವಿ ಎಲ್ಲಾದರೊಂದು ಕಡೆ ತಳಕು ಹಾಕಿಕೊಂಡಿರುತ್ತಾರೆ. ಮಂತ್ರ ಮಾಂಗಲ್ಯ, ಸರಳ ವಿವಾಹ, ಅಂತರಜಾತಿ ವಿವಾಹ  ಮುಂತಾದ  ಮಾತುಗಳು ಈ ಹೊತ್ತಿಗೆ ಅಲ್ಲಲ್ಲಿ ಕೇಳಿ  ಬರುತ್ತಿರುವಾಗ ಸೋಮು ನನಗೆ ಮುಖ್ಯವಾಗಿ ಕಾಣುತ್ತಾನೆ.

ಸೋಮು ಗೌಡರ ಮಗ. ಯಾವುದೋ  ಸಂಪ್ರದಾಯಸ್ಥ ಹುಡುಗಿಗೆ ಕೊಟ್ಟು ಮದುವೆ ಮಾಡಬೇಕೆನ್ನುವ ಇರಾದೆ ಅವನ ತಂದೆ ತಾಯಿಗಿರುತ್ತದೆ ಆದರೆ ಈತ ಬ್ರಾಹ್ಮಣ ಹುಡುಗಿ  ನಳಿನಾಕ್ಷಿಯನ್ನು ಪ್ರೀತಿಸುತ್ತಿರುತ್ತಾನೆ ಈ ತಳಹದಿಯಲ್ಲಿಯೆ ಸೋಮುವಿನ ತವಕ ತಲ್ಲಣಗಳು ಕೆಲವು  ಸಂಕೇತಗಳ ಮೂಲಕ ವಿವರಿಸಿದ್ದಾರೆ.

ಹುಲಿಯೂರಿನ ಸರಹದ್ದು ಎಂದರೆ ಗೌಡರಿಗೊಂದು ಧೈರ್ಯ ಮತ್ತು  ಅಧಿಕಾರ ತಮ್ಮೂರು ಯಾರ ತನ್ನ ಮಾತು ಮೀರಲಾರರೆಂದು. ಅವರ ಮಗ ಸೋಮುವಿಗೆ ಮಾತ್ರ  ಉಸಿರುಗಟ್ಟಿಸುವ ಈ ಸರಹದ್ದಿನೊಳಗೆ ಸ್ವಾತಂತ್ರದ ಗಾಳಿ ನುಗ್ಗಿಸುವ ತವಕ.

” ಅಯ್ಯೋ,  ಈ ಹುಲಿಯೂರಿನ ಸರಹದ್ದಿನಲ್ಲಿ ಒಂದು ಇನ್ನೊಂದುಕ್ಕಾಗಿ ಬದುಕಿದೆ. ಗಾಳಿ ಕೂಡಾ ಈ ಕಾಡಿನ ಮಂಗನಬಳ್ಳಿ ಗಿಜರಿನಲ್ಲಿ ಕೈಗೆ ಬೇಡಿ ಹಾಕಿಸಿಕೊಂಡ ಖೈದಿ. ನಾನು ಈ ಅಪ್ಪನಿಗಾಗಿ ಬದುಕುತ್ತಿದ್ದೇನೆ, ಅವನು ಅವನಜ್ಜನಿಗಾಗಿ, ನನ್ನ  ಮಗ ನನಗಾಗಿ”…- ಸೋಮು ಇಲ್ಲಿ ಕುರಿಯಂತೆ ತಲೆ ಅಲ್ಲಾಡಿಸುವ ಪರಂಪರೆಯನ್ನು ಮುರಿಯಬೇಕೆನ್ನುತ್ತಿದ್ದಾನೆ. “ಈ ಅಪ್ಪ ಅಮ್ಮರ ಕುತ್ತಿಗೆಗೆ ಕೊಕ್ಕಿನಿಂದ ಇರಿದು ಬಾಂದಳದ ಬಿತ್ತರಕ್ಕೆ ನೆಗೆದುಬಿಡಬೇಕು” – ಸೋಮು ತಾನೊಂದು ಗರುಡನಾಗಬೇಕೆಂದು ಊಹಿಸಿ ಅದರಷ್ಟೇ ಶಕ್ತಿಶಾಲಿ ಮತ್ತು  ಎಲ್ಲದರ ಮೇಲೆ ತನ್ನ ರೆಕ್ಕೆಯ ಭಯದ ನೆರಳು ಸುರಿಯಬೇಕೆಂದಿದಾನೆ. ಆಕಾಶದಲ್ಲಿ ಹಾರುತ್ತಿದ್ದ ಗರುಡ  ಅದು ಹೇಗೊ ಕೆಳಗೆ ಬಂದು ಸೋಮುವಿನ ಕೈಯಲ್ಲಿ ಸಿಕ್ಕಿಬೀಳುತ್ತದೆ ಅದರ ಯಮಯಾತನೆ ತಾಳಲಾರದೆ ತನ್ನ  ಬಾಯಿಂದ ಆ ಗರುಡದ ರುಂಡದ ರಕ್ತ ಕುಡಿದು ಸಾಯಿಸುತ್ತಾನೆ ಅವನ ತಂದೆ ಇನ್ನೂ ಮೇಲೆ ನೀ ಹಾಳಾಗು ನಮ್ಮ  ಜಾತಿ ಭ್ರಷ್ಟ ಮಾಡಿದೆಯಂದು ಹೇಳುತ್ತಾನೆ. ಇಲ್ಲಿ ನಾವು ಮುಖ್ಯವಾಗಿ ಯೋಚಿಸಬೇಕಾಗಿರುವುದು ” ಸೋಮುವಿಗೆ ಹೇಗಾದರೂ ಹೋಗಿ ಬದುಕು ಎನ್ನುವಾಗಲು, ಮೌಢ್ಯದ  ಆಧಾರವನ್ನೆ ಮುಂದಿಟ್ಟುಕೊಂಡ ತಂದೆಯ ವಿರುದ್ಧ ಸೋಮು ಸಿಡಿದೆಳುತ್ತಾನೆ. ನನ್ನ ಮೇಲೆ ನಳಿನಾಕ್ಷಿಗೆ ಅಷ್ಟು ಪ್ರೇಮವಿದ್ದರೆ ನನ್ನ ಜೊತೆ ಬರಲಿ ಎಂದು ಹೇಳುತ್ತಾನೆ.

ಈ ಕಥೆ ಅವಲೋಕಿಸಿದಾಗ ತೇಜಸ್ವಿಯವರು ಹೇಳುತ್ತಿರುವುದೇನು ? ಸೋಮು ಹುಲಿಯೂರಿನ ಸರಹದ್ದು ಮುರಿದನೆ ? ಅಥವಾ ಅದೊಂದು ಪಲಾಯನವೆ. ಸ್ವತಹ ತೇಜಸ್ವಿ ನಿಜ ಬದುಕಿನಲ್ಲಿ ಪ್ರೇಮ ವಿವಾಹವಾದವರು.  ಈ ಕಥೆ ಪ್ರೇಮಿಗಳು ಎದುರಿಸಬೇಕಾಗುವ ಕೆಲವು ಅನಿಷ್ಟ  ಪರಂಪರೆಯ ಮೀರುವಿಕೆ ಮತ್ತು  ಆರ್ಥಿಕ ಸ್ವಾತಂತ್ರದ ಬದುಕಿನ ನಡುವಿನ ಸೂಕ್ಷ್ಮ ನೋಟದ ಗೆರೆಯಾಗಿದೆ. ತನ್ನವರನೆಲ್ಲ ಬಿಟ್ಟು ಬರಲಿ ನನ್ನ ಮೇಲೆ ನಳಿನಾಕ್ಷಿಗೆ ಪ್ರೇಮವಿದ್ದರೆ ? ಇಲ್ಲಿ  ಸೋಮುವಿನ ನಂಬಿಕೆ ಮತ್ತು  ಅಗಾಧವಾದ ಪ್ರೇಮವಿದೆ ಜೊತೆಗೆ ಅವಳು ಬರದಿದ್ದರೂ ಪರವಾಗಿಲ್ಲ  ಈ ಹುಲಿಯೂರಿನ ಕೊಚ್ಚೆಯಿಂದ ಜಿಗಿಯುವ ಇರಾದೆ ಇದೆ. ಅಂತರಜಾತಿ ವಿವಾಹಕ್ಕೆಂದು ತಯಾರಾದವರ ಸಿಟ್ಟು ಸೆಡವು,ಏಕಾಂಗಿತನ, ಹೊಂಬು ಧೈರ್ಯ,  ನಂಬಿಕೆ, ಅಗಾಧ ಪ್ರೀತಿ  ಎಲ್ಲವೂ ಈ ಕ
ತೆಯಲ್ಲಿದೆ…