Monday 29 May 2017

ಕಾವ್ಯ ಮನೆ ಬಳಗ..

*ಕಾವ್ಯ ಮನೆ*ಸಮಿತಿಯ ಮೊದಲ ಸಭೆ...

ಅಕ್ಷರ ಜೋಪಡಿಯಡಿ ಭವಿಷ್ಯತ್ತಿನ ಕನಸು ಎಂಬಂತೆ ಕಾವ್ಯಮನೆಯ ಜಗಲಿಯಲ್ಲಿ ಸ್ನೇಹಲತ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಅಕ್ಷರಗಳೇ ನೇರ ರಾಜಕಾರಣದ ಮೂಲಾಶಯವನ್ನು ಹೊಂದಿರುವ ಈ ಸಂದಭ೯ದಲ್ಲಿ ಕವಿ ವಹಿಸಬೇಕಾದ ಪಾತ್ರ ಮತ್ತು ಎದುರಿಸಬೇಕಾದ ಸವಾಲುಗಳನ್ನು ಕುರಿತು ಸುಧೀಘ೯ವಾಗಿ ಚಚಿ೯ಸಲಾಯಿತು. ಒಂದು ಸಂಸ್ಥೆ ಕೇವಲ ಅಂತರ್ ಪ್ರವಾಹವಾಗಿ ಮಾತ್ರ ಕಾಯ೯ನಿವ೯ಹಿಸದೆ ವತ೯ಮಾನದ ಆಗುಹೋಗುಗಳೊಂದಿಗೆ ಸ್ಪಂದಿಸುತ್ತಾ ಸಂಚಲನ ಪ್ರಕ್ರಿಯಾತ್ಮಕವಾಗಿರಬೇಕೆಂಬುದನ್ನು ನಿಣ೯ಸಲಾಯಿತು.  ಲಿಂಗರಾಜಕಾರಣ ಮತ್ತು ಸಾಂಸ್ಕೃತಿಕ ಯಜಮಾನ್ಯತೆಯ ಸ್ಪಂದನೆಗೆ ಸಂವಿಧಾನಾತ್ಮಕ ಸಹಕಾರವನ್ನು ಬಳಸಿಕೊಂಡು ನಾವು ಮುಂದುವರಿಯುವ ಮಾಗ೯ಗಳನ್ನು ಅನುಸರಿಸುವ ಕ್ರಮವು ಮುಖ್ಯವಾದುದು. ಕಾವ್ಯಮನೆಯ ಆಶಯವೂ ಅದೇ ಆಗಬೇಕೆಂಬ ನಿಧಾ೯ರ ಖಚಿತಪಡಿಸಲಾಯಿತು.

ಚರ್ಚೆಗಳು ಮತ್ತು  ಸಮಿತಿ ರಚನೆ.

27/5/2017 ರಂದು ಮುಂಜಾನೆ  10 ಗಂಟೆಗೆ ಕಾವ್ಯ ಮನೆಯ ಗುರುಗಳಾದ ಹೈ.ತೋ ಮನೆಯಲ್ಲಿ  ಸಭೆ ಕರೆಯಲಾಗಿತ್ತು. ಒಟ್ಟು 8 ಜನ ಸದಸ್ಯರು ಭಾಗವಹಿಸಿದರು.

ಸಂಜೆವರೆಗೂ ನಡೆದ ಚರ್ಚೆಯ ನಂತರ ಅನೇಕ ನಿರ್ಣಯ ಕೈಗೊಳ್ಳಲಾಯಿತು.

*ಮೊದಲಿಗೆ ಕಾವ್ಯ ಮನೆಯ ಉದ್ದೇಶಗಳ ಚರ್ಚೆ ಆಯಿತು. ನಂತರ ಕಾವ್ಯ ಮನೆ ಸಂಘಟನೆಯ ಅಡಿ ಪ್ರಕಾಶನ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.

* ಪುಸ್ತಕ ಪ್ರಕಟಣೆಗಳ ಆಯ್ಕೆಗೆ ಆಯ್ಕೆ ಸಮಿತಿ ರಚಿಸುವುದು.

* ಕಾವ್ಯ ಮನೆಯ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧ್ಯಕ್ಷರ ಜಂಟಿ ಖಾತೆಯೊಂದಿಗೆ ಪಾರದರ್ಶಕವಾಗಿ ನಡೆಸುವುದು .

*ಸಾಮೂಹಿಕ ನಿರ್ಧಾರ ಮತ್ತು ವೈಯಕ್ತಿಕ ಜವಾಬ್ದಾರಿ* ಈ ಸಾಲಿನಡಿ ನಾವೆಲ್ಲ ಒಗ್ಗಟ್ಟಾಗಿ ಕನ್ನಡ ಸಾಹಿತ್ಯ, ಹೋರಾಟ, ಜನಪರ ಕಾರ್ಯಕ್ರಮಗಳಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳುವುದು.

*ಕಾವ್ಯ ಮನೆ* ಯ ಸಮಿತಿಯೊಂದನ್ನು ಎರಡು ವರ್ಷಗಳವರೆಗೆ ನಾಮನಿರ್ದೇಶಿತ ಆಯ್ಕೆ ವಿಧಾನದ ಮೂಲಕ ಅಂತಿಮಗೊಳಿಸಲಾಯಿತು.

ಅಧ್ಯಕ್ಷರು - *ಅಬ್ದುಲ್ ಹೈ.ತೋ.* ಬಳ್ಳಾರಿ.

ಉಪಾಧ್ಯಕ್ಷರು - *ರಮ್ಯ*  ಶಿವಮೊಗ್ಗ.

ಉಪಾಧ್ಯಕ್ಷರು - *ಸಚಿನ ಅಂಕೋಲಾ* ಉಡುಪಿ.

ಪ್ರಧಾನ ಕಾರ್ಯದರ್ಶಿ-  *ಅರಡಿಮಲ್ಲಯ್ಯ. ಪಿ.*ಚಳ್ಳಕೆರೆ

ಸಹ ಕಾರ್ಯದರ್ಶಿ-  *ಶ್ರೀಕಾಂತ ತಾಮ್ರಪಣಿ೯*. ಹೊಸಪೇಟೆ

ಜಂಟಿ ಕಾರ್ಯದರ್ಶಿ-  *ಸ್ನೇಹಲತಾ* ಚಿಂಚೋಳಿ.

ಸಂಘಟನಾ ಕಾರ್ಯದರ್ಶಿ-  *ಪ್ರವೀಣ ಪಿ.ಕೆ* ಗದಗ.

ಸಂಚಾಲಕರು /ಕೋಶಾಧ್ಯಕ್ಷರು - *ಕಪಿಲ ಪಿ ಹುಮನಾಬಾದೆ* ಕಲಬುರ್ಗಿ.

ಸಹ ಸಂಚಾಲಕರು - *ಶಾಂತೇಶ ಕೋಡ್ಲೆ*. ಕಲಬುರ್ಗಿ

ನಿರ್ದೇಶಕರು :
*ಚಾಂದ್ ಪಾಶ* ಬೆಂಗಳೂರು
*ಹಸನ್*ಬಡಗನೂರು ಮಂಗಳೂರು.

# ಕಾವ್ಯ ಮನೆ ಬಳಗ

No comments:

Post a Comment