Tuesday 4 July 2017

ವಿಸ್ಮಯ ವಿಶ್ವ- ೧( ಪುಸ್ತಕ ವಿಮರ್ಶೆ)

ರಷ್ಯಾದ ಚಕ್ರವರ್ತಿ ನಿಕೋಲಾಸ್ ಕಗ್ಗೊಲೆಯನ್ನು ಅರುವತ್ತು
ವರ್ಷಗಳ ಬಳಿಕ ಜಾಡು ಹಿಡಿಯುತ್ತಾ ಕಮ್ಯುನಿಷ್ಟರ ನಿಷ್ಠೂರ ಕ್ರೌರ್ಯವನ್ನು ಪತ್ತೆ ಹಚ್ಚುವ ವೃತ್ತಾಂತದ ರೋಮಾಂಚಕಾರಿ ವಿವರಣೆಯೇ ಈ‌‌ ಪುಸ್ತಕ.ಕೊಲೆಯ  ೧೬ ವರ್ಷಗಳ ತರುವಾಯ ಜನಿಸಿದ ರೈಬೋವ್ ಅನ್ನುವ ಹೆಸರಿನ ಪತ್ರಕರ್ತ ಖೂನಿಯಾದ ರಾಜನ ಕುಟುಂಬದವರ ಮೃತದೇಹ, ಮತ್ತು‌‌ ಕೊಲೆಯ ಹಿಂದಿನ ರಹಸ್ಯ ಭೇಧಿಸುತ್ತಾನೆ. ಬಹುಃಶ ಆಂಗ್ಲ ಬಾಷೆಯಲ್ಲಿ ಚರಿತ್ರೆಗಾರನೊಂದಿಗೆ‌ ಗೋರಿ ಸೇರ ಬೇಕಾದ ಅದ್ಭುತ ಚರಿತ್ರೆ ಕನ್ನಡದಲ್ಲಿ ಪಡಿಮೂಡುವುದೇ ಮಿಲೇನಿಯಂ ಸರಣಿಗಳ ಸ್ವಾರಸ್ಯ. ಅನಿಷ್ತಿಸಿಯಾ ಎಂಬ ನಿಕೋಲಸ್ ಚಕ್ರವರ್ತಿಯ ಮಗಳು ದಶಕಗಳ ಕಾಲ ಹೋರಾಡಿಯೂ ಮಂಜಿನಲ್ಲಿ ಮಾಯವಾಗುವ ಸ್ಥೂಲವಾದ ಕಥೆಯನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.
ಜೀವ ಕೌತುಕದ ಮಡಿಲಾದ ತೇಜಸ್ವಿ ಬರಹಗಳು ,ವಿಸ್ಮಯ ವಿಶ್ವ ಪುಸ್ತಕದಲ್ಲೂ ಹೊರತಾಗಿಲ್ಲ. ಗೋಡೆಯ ಮೇಲೆ ಹರಿವ ಸಣ್ಣ ಹಲ್ಲಿ ಆಕಾರದ ಉಡಗಳು ನಮಗೆ ಡ್ರ್ಯಾಗನ್ ದಂತಕಥೆಗಳಿಗೆ ಪುಷ್ಟಿ ನೀಡುತ್ತಲೇ ಬರುತ್ತದೆ. ನಿಜವಾದ ಡ್ರ್ಯಾಗನ್ಗಳ ಜಗತ್ತಿಗೆ ಪರಿಚಯಿಸಲು ಡೋಗ್ಲಾಸ್ ಬರ್ಡನ್ ಪಟ್ಟ ಪಾಡು ಪುಸ್ತಕದಲ್ಲಿ ಅಡಕವಾಗಿದೆ. ಕಡಲಾಮೆಗಳ ಜೀವನ ಸಂತತಿಯನ್ನು ಉಳಿಸಲು ಚಂದ್ರಸ್ಸಿರಿಯೆಂಬ ಹುಡುಗನು ಎಸಗಿದ ಸಾಹಸಗಳು ರೋಮಾಂಚಕ!. ಫಾಸ್ಪೇಟ್ ರಫ್ತಿನಿಂದ ಆಲಸಿಗಳಾದ ನೌರಿ ದ್ವೀಪ ಜನರ ದುರಂತ ಚರಿತ್ರೆ ನಿಜಕ್ಕೂ ದುಃಖಕರ. ಶತಮಾನಗಳಲ್ಲಿ ಬಿಡಿಸಲಾಗದ ಕಗ್ಗಂಟು ಟುರಿನ್ ಶಾಲಿನ ರಹಸ್ಯ ಚಿಂತೆಗೆ ಹಚ್ಚುತ್ತದೆ‌. ವಿಸ್ಮಯ ಜಗತ್ತಿನ ಅಭೇಧ್ಯ ರಹಸ್ಯಗಳು, ವಿಚಿತ್ರ ಜೀವ ಸಂಕುಲಗಳು ತೇಜಸ್ವಿಯವರ ಮಿಲೇನಿಯಂ ಸರಣಿ ಪುಸ್ತಕಗಳ ವಸ್ತು. ಕುತೂಹಲದ ಪರಾಕಾಷ್ಠೆಗೆ ತಲುಪಿದಾಗಲೆಲ್ಲಾ ತೇಜಸ್ವಿ ಇನ್ನೊಮ್ಮೆ ಹುಟ್ಟಿಬರಲೆಂದು ಮನದ ಮೂಲೆಯಲ್ಲಿ ಹಾರೈಕೆಯೊಂದು ನಮಗರಿವಿಲ್ಲದೆ ಜೀವ ತಳೆಯುತ್ತದೆ.

- ಮುನವ್ವರ್ ,ಜೋಗಿಬೆಟ್ಟು

No comments:

Post a Comment