Wednesday 5 April 2017

ಕೈಬರಹ ಪತ್ರಿಕೆ ವಿಶೇಷಾಂಕ

ಸ್ನೇಹಿತರೇ....

ದೀವಟಿಗೆ ಯುವಜನರ ಹೊಸ ಪ್ರಯೋಗವಾದ ಕೈಬರಹ ಪತ್ರಿಕೆಯು ಒಂದು ವರ್ಷವನ್ನು ಪೂರೈಸಿದ್ದು, ವಾರ್ಷಿಕ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡುವ ಸಂಭ್ರಮದಲ್ಲಿದೆ.

ನಮ್ಮೊಳಗಿನ ಯೋಚನೆಗಳನ್ನು, ಭಾವನೆಗಳನ್ನು, ಪ್ರತಿರೋಧಗಳನ್ನು ಹೊರಹಾಕಲು ನಾವೇ ಹುಡುಕಿಕೊಂಡ ದಾರಿಯಿದು. ಮೊದಲು ಕೆಲವು ಯುವಜನರಿಂದ ಆರಂಭವಾದದ್ದು ಇಂದು ಹಲವು ಯುವಜನರ ಭಾವನೆಗಳ ಆಭಿವ್ಯಕ್ತಿಗೆ ಮಾಧ್ಯಮವಾಗಿದೆ.. ಸಾಕಷ್ಟು ಜನ ಚಿಂತಕರು, ಹೋರಾಟಗಾರರು, ಪ್ರಗತಿಪರರ ಮೆಚ್ಚುಗೆಯನ್ನು ಗಳಿಸಿದೆ.. ಈ ಪ್ರಯತ್ನವು ಮತ್ತಷ್ಟು ಗಟ್ಟಿಗೊಂಡು ಸಾಹಸ್ರಾರು ಯುವಜನರನ್ನು ತಲುಪಿ, ಬರವಣಿಗೆಗೆ ಪ್ರೇರೇಪಿಸುವಂತೆ ಮಾಡಲು ನಿಮ್ಮೆಲ್ಲರ ಸಹಕಾರ ಅಗತ್ಯ....

ಇದೇ ಶನಿವಾರ, 8ನೇ ತಾರೀಖು ಸಂಜೆ ನಾಲ್ಕು ಗಂಟೆಗೆ ನಮ್ಮ ವಿಶೇಷ ಸಂಚಿಕೆಯ ಬಿಡುಗಡೆ ಕಾರ್ಯಕ್ರಮವಿದ್ದು, ನೀವೆಲ್ಲರೂ ಭಾಗಿಯಾಗಿ ನಮ್ಮೊಂದಿಗಿರುತ್ತೀರೆಂದು ಆಶಿಸುತ್ತೇವೆ..

ಧನ್ಯವಾದಗಳೊಂದಿಗೆ..

ದೀವಟಿಗೆ ಯುವಜನ ವೇದಿಕೆ...

No comments:

Post a Comment