Tuesday 14 March 2017

ಇಸ್ಮಾಯಿಲ್ ಚುಟುಕುಗಳು...


1.
ಕಾಶ್ಮೀರದ ಸೇಬುಗಳು ಹೆಚ್ಚು ಕೆಂಪಾರಲು ಬಹುಶಃ ದಿನವೂ ಅಲ್ಲಿ ಗುಂಡಿಗೆಗಳಿಂದ ಸಿಡಿಯುವ ರಕ್ತವೇ ಕಾರಣವಿರಬಹುದು!

2.
ಹಸಿರೆಲೆ ಡಿಜಿಟಲ್ಲಾಯ್ತು ,
ಭತ್ತದ ತೆನೆಗೆ ನೀರುಣಿಸುವ ಬೇರಿಗೂ ಕೇಬಲ್ಲಿನ ಲೇಪನ ,
ಹೊಟ್ಟೆಗಿಳಿಯುವ ಅನ್ನಕ್ಕೆ
ಕರೇನ್ಸಿ ಬೇಕಾಯ್ತು..!!
ಹಸಿವು ಮಾತ್ರ ಇನ್ನೂ
ತಿಪ್ಪೆಯಲ್ಲೆ ರಿಂಗಣಿಸುತ್ತಿದೆ!!

3.
ಅಯ್ಯೋ ದೇವ್ರೆ!
ಆ ಕರ್ರಗಿನ ಆಕಾಶದಲ್ಲಿ
ಕಾಣುತ್ತಿದ್ದದ್ದು
ಚುಕ್ಕಿ ಎಂದುಕೊಂಡಿದ್ದಾರೆ!

ಪಾಪ ಅವರಿಗೇನು ಗೊತ್ತು
ಅವು,
ನನ್ನವಳ ಜೊತೆ ಸೇರಿ
ನಾ ಬಿತ್ತಿದ ಕನಸ ಬೀಜಗಳೆಂದು!!!

# ಇಸ್ಮಾಯಿಲ್

No comments:

Post a Comment