Monday 20 March 2017

ಪುಸ್ತಕ ವಿಮರ್ಶೆ ಪಿ.ಕೆ


ಕೃತಿ-ಗುಬ್ಬಚ್ಚಿ ಗೂಡಿನಲ್ಲಿ
ಕವಿ-ಅನಿಲ್ ಗುನ್ನಾಪುರ

ಗುಬ್ಬಚ್ಚಿ ಗೂಡಿನಲ್ಲಿ ಅಂದೊಡನೆ ನನಗೆ ನೆನಪು ಆಗಿದ್ದು ಕೆ ಪಿ ಪೂರ್ಣಚಂದ್ರ ತೇಜಸ್ವಿ ರವರು ಅವರ "ಕರ್ವಾಲೋ" ಹಾಗೂ
"ಏರೋಪ್ಲೇನ ಚಿಟ್ಟೆಗಳು"  ಓದಿದ ಮೇಲೆ ಅವರ ಪರಿಸರದ ಬಗ್ಗೆ ಇರುವ ವ್ಯಾಮೋಹಕ್ಕೆ ನಾನು ಪೀದಾ ಆಗಿರುವೇನು.

ಆದರೆ ಇಲ್ಲಿ "ಗುಬ್ಬಚ್ಚಿ ಗೂಡಿನಲ್ಲಿ" ಯುವ ಕವಿಯ ಪ್ರೇಮ ಆಲಾಪನೆಗಳು ಸಾಮಾಜಿಕ ತುಡಿತ ಎಲ್ಲವನ್ನೂ ಕವಿತೆಯಲ್ಲಿ ನೋಡಿದಾಗ ಏನೋ ಒಂಥರಾ ಖುಷಿ.
ಈ ಹರಿಯದ ಕವಿಯ ಪ್ರೇಮ ಭಾವನೆಗಳು ವಿರಹ ವೇದನೆಗಳನ್ನು ಯಾಕೋ ನನಗಾದಂತೆ ಅನಿಸುತ್ತದೆ. ಇಬ್ಬರೂ ಯುವಕರ ಆಗಿರುವುದರಿಂದ ಭಾವನೆಗಳು ಬೇರೆಯಾದರೆ ಮನಸ್ಸಿನ ತುಡಿತಗಳು ಒಂದೆ ಇರುತ್ತದೆ ಅನ್ನೋದು ಬಹಿರಂಗ ಪಡಿಸುವುದೆ.
"ಗುಬ್ಬಚ್ಚಿ ಗೂಡಿನಲ್ಲಿ" ಟ್ಯಾಗ್ ಲೈನ್ "ಕನಸುಗಳು ಮರಿ ಹಾಕಿವೆ"

ಗುಬ್ಬಚ್ಚಿ ಗೂಡಿನಲ್ಲಿ ಎಂದ ಕೂಡಲೇ ಇಲ್ಲಿ ಪರಿಸರ ದರ್ಶನ ಆಗಬಹುದು ಎಂದುಕೊಂಡೆ ?
ಒಂದೆರಡು ಕವಿತೆಗಳನ್ನು ಬಿಟ್ಟರೆ ಪರಿಸರ ದರ್ಶನ ಆಗಲಿಲ್ಲ. ಇದು ನನಗೆ ಬೇಸರದ ಸಂಗತಿ.
ಇಲ್ಲಿ ಪರಿಸರ ಕಾಳಜಿಗಿಂತ ಸಾಮಾಜಿಕ ತುಡಿತ ಬಹಳ ಎಚ್ಚರಿಸಲು ಮುಂದಾಗುತ್ತದೆ.
ಕವಿಯು ಗುಬ್ಬಚ್ಚಿ ನನ್ನ ಇಷ್ಟವಾದ ಪಕ್ಷಿ ಎಂದು ಹೇಳಿಕೊಂಡ ಒಂದು ಕಡೆ ಪಕ್ಷಿ ಪ್ರೇಮಿಯಾಗಿಯ ಉಳಿಯುತ್ತಾರೆ.

"ಅಸಾಮಾನ್ಯಳು" ಕವಿತೆಯಲ್ಲಿ ಪೌರಕಾರ್ಮಿಕರ ದಿನ ನಿತ್ಯದ ದಿನಚರಿಯನ್ನು ನಮಗೆ ದರುಶನ ಮಾಡಿಸಿ. ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿದ್ದಾರೆ ಎನ್ನಬಹುದು.
ಅಸಾಮಾನ್ಯಳಲ್ಲಿ ಸಮಾನತೆಯನ್ನು ಎಷ್ಟು ಸೊಗಸಾಗಿ ನಿರೂಪಣೆ ಮಾಡಿದ್ದಾರೆ.
"ಬೆಳಕು" ಕವಿತೆಯಲ್ಲಿ ಬುಧ್ಧ ಕೃಷ್ಣ ಅಲ್ಲಾ ಯೇಸುವಿನನ್ನು ಬರುವ ನಾಲ್ಕು ಪ್ಯಾರದಲ್ಲಿನ ಹೋಲಿಕೆ ನೋಡಿದಾಗ ದೇವರು ಒಂದೇ ಎಂದು ಸಾಬೀತುಪಡಿಸುತ್ತಾರೆ.
"ಅಣ್ಣ ಬಸವಣ್ಣ" ಈ ಕವನ ಸಂಕಲನದಲ್ಲಿ ನನಗೆ ಇಷ್ಟವಾದ ಕವಿತೆಯ ಸಾಲಿನಲ್ಲಿ ಮೊದಲನೇ ಸಾಲಿನಲ್ಲಿ ಇದೆ
"ನೀ ಆಡಿ ಬೆಳೆದ ಅಂಗಳದಲ್ಲಿ ಕಸ ಇನ್ನೂ ಹಾಗೇ ಇದೆ ಗುಡಿಸುವೆನು ಚೂರು ಬಾರಿಗೆ ನೀಡು ಬಾರಣ್ಣ" ಎಂದು  ನೇರವಾಗಿ ಕಾಲಜ್ಞಾನಿ ಬಸವಣ್ಣನವರನ್ನು ನೇರವಾಗಿ ಕರೆಯುತ್ತಾರೆ ಎಂದರೆ ನಮ್ಮ ಸಮಾಜ ಪರಿಸ್ಥಿತಿ ಬದಲಾಗಿಲ್ಲ ಇನ್ನೂ ಎಂದರ್ಥವೇ ಸರಿ ಅಸಹಾಯಕತೆಯಿಂದಲ್ಲೆ ಈ ಕವಿತೆ
ಹುಟ್ಟಿರಬಹುದು.

ಇಲ್ಲಿ ಬಹಳ ಕವಿತೆಗಳು ಕಾವ್ಯಾತ್ಮಕವಾಗಿಯ ಬಂದಿದೆ ಆದರೆ ಅಲ್ಲೊಂದು ಇಲ್ಲೊಂದು ಕವಿತೆಗಳು ಯಾಕೋ ಸ್ವಲ್ಪ ಗದ್ಯಮಿಶ್ರಿತವಾಗಿವೇ ಅದರ ಬಗ್ಗೆ ಸ್ವಲ್ಪ ಎಚ್ಚರ ವಹಿಸಿಕೊಳ್ಳಬೇಕಿತ್ತು.
"ಬಸವ ನಿಲಯ" ಕವಿತೆ ಗದ್ಯಮಿಶ್ರಿತವಾದರು ಅದರ ಆಳ ಅಗಲ ವಿಚಾರಕ್ಕೆ  ಪ್ರಾಮುಖ್ಯತೆ ಕೊಡಲೇ ಬೇಕು ಅಷ್ಟು  ಸರಳ ಸಜ್ಜು ಓದುಗರನ್ನು ಹಿಡಿದಿಡುತ್ತದೆ.
ಈ ಕವಿಯ ಕವಿತೆ ಕಟ್ಟುವ ಕರಾಮತ್ತು ನೋಡಿದಾಗ ಇನ್ನೂ ಭರ್ಜರಿಯಾಗಿ ಪದ ಪ್ರಯೋಗ ಮಾಡಿ ಭಾವನೆಗಳುನ್ನು ಹರಿಬಿಟ್ಟು
ತಮ್ಮದೆ ಆದ ಹೊಸ ಲೋಕವನ್ನು ಕಟ್ಟಬಹುದಿತ್ತು ಅನಿಸುತ್ತದೆ.

"ಪ್ರೇಮ ಬಳ್ಳಿ" ಕವಿತೆಯ ಸಾಲುಗಳು ಗ್ರಾಮೀಣ ಜಾನಪದ ಸೊಬಗನ್ನು ನೆನಪಿಸಿ ನೇರೆವಾಗಿ ಮನಮುಟ್ಟಿತ್ತದೆ.
"ತುಂಬಾ ಮಾತಾಡಬೇಕಿದೆ" ಈ ಕವಿತೆಯಲ್ಲಿ ಅಷ್ಟೇ ಅಲ್ಲ ನಿಮ್ಮ ಇಡೀ ಕವನ ಸಂಕಲನವೇ ತುಂಬಾ ಮಾತುಡುತ್ತೀದೆ. ಒಂದು ಭರವಸೆಯ ಮಾತನ್ನು ಹೇಳಬಯಸುತ್ತೇನೆ ನೀವು ತುಂಬಾ ಮಾತು ನಾಡಿದ್ದೀರಾ ನಿಮ್ಮ ಬಗ್ಗೆ ನಾವುಗಳು ಮಾತನಾಡುವುದು ಬಾಕಿ ಇದೆ ಎಂಬ ಭರವಸೆ ಮಾತನ್ನು ನಾನು ಕೊಡುತ್ತೇನೆ.

ಪಿ ಕೆ...?
ನವಲಗುಂದ

1 comment:

  1. ಚೆನ್ನಾಗಿದೆ ಕವಿತೆಯ ಹೊಳಹು ಗಳು
    ಸಂಗೀತ ರವಿರಾಜ್ ಚೆಂಬು ಮಡಿಕೇರಿ

    ReplyDelete