Friday 17 March 2017

ತೆರೆದ ಮನ(ವಿಮರ್ಶೆ)

ತೆರೆದ ಮನ (ಪುಸ್ತಕಭಿಪ್ರಾಯ)
ಇತಿಹಾಸ- ಎಸ್ ದಿವಾಕರ್.

ಒಂಭತ್ತು ಕಥೆಗಳು ಹೊಂದಿರುವ ಇತಿಹಾಸ ಕಥಾಸಂಕಲನದಲ್ಲಿ ಎರಡು ಭಾಗಗಳಿವೆ. ಕೇವಲ ವಿಷಯ ವಸ್ತು  ಅಥವಾ ಕಥಾ ರಚನೆಯ ಕಾಲಘಟ್ಟದಾಧರದ ಮೇಲೆ ದ್ವಿಭಾಗ ಮಾಡಿಲ್ಲ. ಸಂಪೂರ್ಣ ವಿಷಯ- ವಸ್ತು, ರಚನೆ, ತಂತ್ರ ಎಲ್ಲದರಲ್ಲಿಯೂ ಭಿನ್ನತೆಯಿದೆ. ಮೊದಲ ಭಾಗದ ಕಥೆಗಳಲ್ಲಿರುವ ಮನುಷ್ಯ ಮನಸ್ಸುಗಳ ಹುಡುಕಾಟ,  ತಲ್ಲಣಗಳು, ಬದುಕಿನೊಳನೋಟಗಳು ಎರಡನೇ ಭಾಗದಲ್ಲಿ  ಮಾಯವಾಗಿ ಇನ್ನೊಂದು   ಮುಖವೇ ಪಡೆದಿವೆ. ಸಂಪೂರ್ಣ ಕಾಲ್ಪನಿಕ  ಕಥೆಗಳೆಂದರೂ ಸರಿ. ಶಾಂತಿನಾಥ ದೇಸಾಯಿ ಸಹಿತ ಇದೇ ಹೇಳುತ್ತಾರೆ ಆದರೆ " ಒಂದು ಘಟನೆ" ಕಥೆ ಭಿನ್ನವಾಗಿದೆ.

ಕೌರ್ಯ ಕಥೆಯಲ್ಲಿ ಒಬ್ಬ ಮನುಷ್ಯನಿಗಿರಬೇಕಾದ ಸಾಮಾನ್ಯ  ಸಂವೇದನದ ಕಥೆಯಿದೆ ಮನುಷ್ಯತ್ವದ ಹುಡುಕಾಟವಿದೆ. ಅಲುಮೇಲು ಸಾಯುತ್ತ ರಸ್ತೆಯಲ್ಲಿ ಬಿದ್ದಾಗ ತಳ್ಳುಗಾಡಿಯಲ್ಲಿ ಉಪ್ಪು ಮಾರುವ ಪಳನಿಚಾಮಿಯ ತನ್ನ ತೊಡೆಯ ಮೇಲೆ ಆಕೆಗೆ ಮಲಗಿಸಿಕೊಂಡಿರುತ್ತಾನೆ "
"ನಾನು ಕಪ್ಪಗೇ ಹುಟ್ಟಿದ್ದು ಇವನ ಮಗಳಾಗಿದ್ದಿದ್ದರೆ ನನ್ನನ್ನು ಎಷ್ಟೆಲ್ಲ ಪ್ರೀತಿಸುತ್ತಿದ್ದಿರಬಹುದು ಅಥವಾ ಇವನೇ ಬೆಳ್ಳಗಿದ್ದು ನನ್ನ  ಅಪ್ಪನಾಗಿದ್ದಿದ್ದರೆ, ಅವನ ಹಣೆಯಿಂದಿಳಿದು ತನ್ನ ತಲೆಯ ಮೇಲೆ ತೊಟ್ಟಿಡುತ್ತಿದ್ದ ಬೆವರು  ನಿಜವಾದ ಬದುಕನ್ನು ಕರೆತಂದ ಹಾಗೆ....- ಅಲುಮೇಲು ಆಡುವ ಈ ಮಾತುಗಳು ಇವರೆಗೂ ಅವಳು ಮನುಷ್ಯ ಪ್ರೀತಿಯೆ ಕಂಡಿರಲಿಕ್ಕಿಲ್ಲ, ಮರಭೂಮಿಯ ಅನಂತತೆಯಲ್ಲಿ ಓಯಸಿಸ್ ಕಾಣದ ಒಂಟೆಯಂತೆಯಂಬುವುದು ಸೂಚಿಸುತ್ತವೆ. ಇಗ  ಆ ಪ್ರೀತಿ ಕಂಡು ಸುಖಿಸುತ್ತಿದ್ದಾಳೆ. ಅಪ್ಪ ಫಿಲಾಸಫಿ ಪ್ರೋಫೇಸರ್ ಆದ್ರು ಪ್ರೀತಿ ತೋರಿಸದಿರುವುದಕ್ಕೆ ಕಾರಣವೆಂದರೆ  ಮಗಳು ಪೋಲಿಯೊಕ್ಕೆ ತುತ್ತಾಗಿ ಅಡ್ಡದಿಡ್ಡ ಬೆಳೆದಿದ್ದಾಳೆ. ಅಪ್ಪ,  ಅಮ್ಮ  ಅವಳನ್ನು ಮನುಷ್ಯಳೆಂದು ಕಂಡೆಯಿಲ್ಲ. ತುಂಬಾ ಸಂಕೀರ್ಣವಾದ ಈ ಕಥೆ ನಿಜಕ್ಕೂ ಯಶಸ್ವಿಯಾಗಿದೆ. ಅಲುಮೇಲುವಿಗೂ ಸಹಜತೆಗಳಿವೆ ಯಾರದೋ ಮದುವೆಯಲ್ಲಿ ಮೈಸವರಿದವನ ಬಗ್ಗೆ, ರೈಲಿನ ಕಂಬಿ ಇನಿಯ, ಯಾರೋ ಮದುಕಿ ಅಂತ ಚುಡಾಯಿಸಿದ್ದು...

ಅನಾಥರು ಇದೊಂದು ಇತ್ತೀಚಿನ ಸಾಮಾನ್ಯ ಸಂಗತಿಯಂದೆ ಹೇಳಬಯಸುತ್ತೇನೆ. ಹಳ್ಳಿಯಿಂದ ನೆಮ್ಮದಿ ಹುಡುಕಿಕೊಂಡು ಬರುವ ವೃದ್ಧದಂಪತಿಗಳು ಇಲ್ಲಿ ಕಾಣುವುದು ಮೇಲ - ನೆಲದ ಸುಖ ಮಾತ್ರ, ಒಳಗೆ ಒಂಟಿತನ, ಭಯ, ಅಭದ್ರತೆ ಕೊರೆಯುತ್ತಲೆಯಿದೆ. ನೆಲೆ ಕಥೆ ಒಂದು ರೀತಿಯಲ್ಲಿ ಜಯಾಳ ಸಾಮಾಜಿಕ  ಪರಿಸರದೊಂದಿಗೆ ಹೊಂದಿಕೊಳ್ಳುವಿಕೆ ಬಗ್ಗೆ ಇದೆ. ಅಷ್ಟೇನೂ ಅರ್ಥ ಸಾಧ್ಯತೆಗಳಿಗೆಳೆಯುವುದಿಲ್ಲ ಈ ಕಥೆ. ಯಾಕೆಂದರೆ "-ಮನುಷ್ಯ ಯಾವಾಗಲೂ ಇಂದು ಒಂದಿದ್ದರೆ ನಾಳೆ ಇನ್ನೊಂದಕ್ಕೆ ತೋಳಲಾಡುತ್ತಲೆಯಿರುತ್ತಾನೆ. ಒಂದೇ ಆವರಣದೊಳಗೆ ಬದುಕುವ ಭಿನ್ನ ಪರಿಸ್ಥಿತಿ ಮತ್ತು ಹಿನ್ನಲೆಯ ಮನುಷ್ಯರ ಗುದ್ದಾಟವಿದೆ ಆದರೆ ಎಲ್ಲವೂ ಇಲ್ಲಿ ಹುಚ್ಚುತನಗಳ ಮಧ್ಯೆಯೆ ಮುಗಿಯುತ್ತದೆ.

ಮೃತ್ಯುಂಜಯ - ಒಂದೇ ಸಾರಿಗೆ ಎದೆ ಛಲ್ಲೆನಿಸಿದ ಕಥೆ. ಡಾ ಸ್ವಾಮಿನಾಥನ ಪೊಸ್ಟ್ ಮಾರ್ಟಂಗೆ ಬಂದ ಎಸ್ ಮೃತ್ಯುಂಜಯ ಹೆಸರಿನ ಹೆಣದ ಪೂರ್ವ ಬದುಕಿನನಾವರಣವೇ ಈ ಕಥೆ. ಇದೊಂದು ಪತ್ತೇದಾರಿ  ಕಥೆಯಂದರೆ ಮಿತಿಯಾಗುತ್ತದೆ. ಬದುಕಿರುವ ಮನುಷ್ಯ ಮನುಷ್ಯರ ನಡುವಿನ ಅಪರಿಚಿತತನಗಳ ಹೆಚ್ಚುವಿಕೆಯಂತಹ ಈ ಸಂದರ್ಭದಲ್ಲಿ. ಈ ಕಾಡಿದ್ದು ಸಾಮಾನ್ಯ . " ಬೆಂಗಳೂರಿಗೆ ಮೃತ್ಯುಂಜಯನ ತಂದೆ ತಾಯಿ ಬಂದು ಕಾಯುತ್ತಿರಬಹು"- ಇಡೀ ಕಥೆಯ ಜೀವಾಳವೇ ಇದು. ರಾಧ ಸಹಿತ ಅನ್ಯಾಯವಾಗಿ ಬಲವಂತದಿಂದ ಹಾಸಿಗೆ ಸೇರಿದವಳು
ಅವಳ ಬಸಿರಿಗೂ ಅವಳ ಪ್ರೀಯಕರ ಮೃತ್ಯುಂಜಯನಿಗೂ ಸಂಬಂಧವೇಯಿಲ್ಲ. ಆದರೆ ಸಾವಿಗೆ ?

ಇತಿಹಾಸ ಕಥೆಯೂ ಕೆಲವು ಮಿತಿಗಳನ್ನು ಹೊಂದಿದೆ. ಅದೇ "ಅಸ್ಪಷ್ಟತೆ "ಇದರ ಯಶಸ್ವಿತನವು ಸಹಿತ ಇದೆ ಇರಬಹುದು. ಇತಿಹಾಸವನ್ನು ಸಾಹಿತ್ಯ ಕಟ್ಟಿಕೊಡುವಾಗ ಒಂದೇ ಮುಖ ನೋಡುತ್ತದೆಯೇ ? ಸದಾಶಿವನಿಗೆ ಮದುಕನು ಹೇಳಿದ ಮಾತುಗಳು ಸತ್ಯವೇ ? ಗುರಪ್ಪ ಕೆಟ್ಟವನೇ, ಜನರ ದೌರ್ಬಲ್ಯ ಅರಿತವನೇ ? ಗುರುಪ್ಪನ ಹೆಂಡತಿ ಪೂರ್ವಿತಿಹಾಸವೇನು ?ದುರ್ಗ? - ಒಂದು ಪ್ರಶ್ನೆಯಾಗಿಯೇ ಉಳಿದು ಕಥೆ ಮುಗಿಯುತ್ತದೆ. ಪಟ್ಟಭದ್ರ ಹಿತಾಸಕ್ತಿಗಳೆ ಯಾವಾಗಲೂ  ಎಲ್ಲವನ್ನೂ  ಆಳೊದು. ಇತಿಹಾಸ ಸಹ. ಅರಮನೆಯಲ್ಲಿಯು ಜೈಲಿರುತ್ತದೆಯಂದು ಸದಾಶಿವ ಕಂಡಿದ್ದಿಲೆ.

ಭಾಗ-2 ಕಥೆಗಳು  ಎಷ್ಟೇ ಭಿನ್ನವಾಗಿದ್ದರೂ ಸಹ. ಒಂದರ್ಥದಲ್ಲಿ ಅವೆಲ್ಲ ಮಿಥ್ ಶೈಲಿಯವು. ಕಂಬಾರರ ಹುಲ್ಲು ಹೋಗಿ ಸೈನಿಕರಾಗುವಂತಹ ಪರಿಕಲ್ಪನೆಯವು.
ಮಾರುತಿಗೆ ಹೃದಯಗಳ ಮಂದಿರ ಕಟ್ಟುವುದಾಗಿರಬಹುದು ಅಥವಾ ಹಾರುವ ಮನುಷ್ಯರಾಗಿರಬಹುದು . ಒಂದು ಆಶಯವಂತೂ ಹೊಂದಿವೆ." ದಾರಿಯಲ್ಲಿ "- ಇದೊಂದು ಬೆರಗುಗೊಳಿಸುವ ಕಥೆಯಂತೇ ಹೇಳಬಹುದು ಏನೋ ಹೊಸತನವಿದೆ. ತಂತಿಗಳಿಲ್ಲದೂರು, ಜನರ ಬಾಯಿಗಳೇ ಸಂದೇಶ ರವಾನಿಗಳು. ಕುಡಿದು ಬಂದವನಿದ್ದರೆ ಮುಗಿಯಿತು ಸುದ್ಧಿಯೆ ಪಲ್ಟಿಯಾಗುತ್ತದೆ. ಆದರೂ ಟ್ಯಾಕ್ಸಿ ಡ್ರೈವರ್ ಮನುಷ್ಯನ ಬಾಯಿ ತಂತಿ ತಾರು ಉತ್ತಮವೇನುತ್ತಾನೆ.

ಕಣ್ಣೆದುರು ಚಿತ್ರವೊಂದು ಬಿಡಿಸಿಟ್ಟು ಮಾಯಾವಾಗುವ ಕಥೆಗಾರನನ್ನು "ದಾರಿಯಲ್ಲಿ" ಮತ್ತು  "ಒಂದು ಘಟನೆ" ಈ ಎರಡು ಕಥೆಗಳಲ್ಲಿಯು ಕಾಣಬಹುದು....
"ಅನುಭವವನ್ನು ಮೂರ್ತೀಕರಿಸುವಲ್ಲಿ ಅವರಿಗೆ ನಿಜವಾದ ಅಸ್ಥೆಯಿದೆ, ಆಸ್ಥೆಗೆ ತಕ್ಕಂತೆ ಹುಲುಸಾದ ಕಲ್ಪಕತೆಯಿದೆ"- ಶಾಂತಿನಾಥ ದೇಸಾಯಿವರ ಈ ಮಾತುಗಳು ನಿಜವೆನಿಸುತ್ತವೆ.ಕೊನೆಯ ನಾಲ್ಕು ಕಥೆಗಳೊದಿದ್ದಾಗ.....

ಕಪಿಲ ಪಿ. ಹುಮನಾಬಾದೆ.
17-03-2017

No comments:

Post a Comment